Advertisement

ತಿಕೋಟಾ: ಉಜ್ಜಯಿನಿ ಪೀಠ ಶಾಖಾಮಠ ಬಾಬಾನಗರದ ಷಣ್ಮುಖ ಶ್ರೀಗಳು ಲಿಂಗೈಕ್ಯ

07:37 PM Jul 28, 2022 | Vishnudas Patil |

ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಮದ ಉಜ್ಜಯಿನಿ ಪೀಠದ ಶಾಖಾಮಠ ಹಿರೇಮಠದ ಷಣ್ಮುಖ ಶ್ರೀಗಳು ಗುರುವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.

Advertisement

ವಿಜಯಪುರ ಜಿಲ್ಲೆಯ ಅಪಾರ ಭಕ್ತ ಸಮೂಹ ಅಗಲಿದ್ದಾರೆ. ಬಾಬಾನಗರದ ಮಠದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಠದಲ್ಲಿ ಗುರುವಾರ ರಾತ್ರಿ ಭಕ್ತರು ಜಾಗರಣೆ, ಭಕ್ತಿಗೀತೆ, ಭಜನೆ ಹಮ್ಮಿಕೊಂಡಿದ್ದಾರೆ.

ಜು.29 ರಂದು ಬೆ.10 ರಿಂದ ಶ್ರೀಗಳ ಅಂತಿಮ ಯಾತ್ರೆಯ ಮೆರವಣಿಗೆ ನಡೆಯಲಿದೆ. ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಶ್ರೀಶೈಲ ಪೀಠ, ಉಜೈಯಿನಿ ಪೀಠಗಳ ಜಗದ್ಗುರುಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಶ್ರೀಮಠದ ಭಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next