Advertisement

Kota; ಪಾರಂಪಳ್ಳಿ ದೇವಸ್ಥಾನದ ಆಸುಪಾಸಿನಲ್ಲಿ ಕಳ್ಳನ ಓಡಾಟದ ಸುದ್ದಿ

12:45 AM Oct 18, 2024 | Team Udayavani |

ಕೋಟ: ಸಾಲಿಗ್ರಾಮ ಸಮೀಪದ ಪಾರಂಪಳ್ಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಸುಪಾಸಿನಲ್ಲಿ ರಾತ್ರಿ ವೇಳೆ ಕಳ್ಳರ ಸಂಚಾರದ ಕುರಿತು ಸ್ಥಳೀಯರಲ್ಲಿ ಅನುಮಾನ ವ್ಯಕ್ತವಾಗಿದೆ.

Advertisement

ವಾರದ ಹಿಂದೆ ಸ್ಥಳೀಯ ಮನೆಯೊಂದರ ಸಮೀಪ ರಾತ್ರಿ ಆಗುಂತಕ ವ್ಯಕ್ತಿಯೋರ್ವ ಅನುಮಾನಸ್ಪದ ರೀತಿಯಲ್ಲಿ ಓಡಾಟ ನಡೆಸುತ್ತಿದ್ದ. ಅನಂತರ ಸಿಸಿ ಟಿ.ವಿ. ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೋರ್ವ ಕಾಂಪೌಂಡ್‌ ಬಳಿ ಓಡಾಡುವ ದೃಶ್ಯ ಕಂಡುಬಂದಿತ್ತು. ಈ ಬಗ್ಗೆ ಪೊಲೀಸರಿಗೆ ಮೌಖೀಕವಾಗಿ ತಿಳಿಸಿದ್ದು, ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾರದ ಅನಂತರ ಘಟನೆಯ ಸಿಸಿ ಟಿ.ವಿ.ಯ ದೃಶ್ಯ ಮೊಬೈಲ್‌ನಲ್ಲಿ ಹರಿದಾಡಿದ್ದು, ಆತಂಕ ಮೂಡಿಸಿದೆ. ಕಳೆದ ತಿಂಗಳು ಹಂಗಾರಕಟ್ಟೆ ಭಾಗದಲ್ಲೂ ಇದೇ ರೀತಿ ಆಗಂತುಕ ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ಸಂಚಾರ ನಡೆಸುತ್ತಿದ್ದರು. ಕೆಲವು ಮನೆಗಳ ಬಾಗಿಲು ಬಡಿಯುತ್ತಿದ್ದರು ಎನ್ನುವ ಬಗ್ಗೆಯೂ ದೂರು ಕೇಳಿ ಬಂದಿತ್ತು. ಪೊಲೀಸರು ರಾತ್ರಿ ಗಸ್ತು ಹೆಚ್ಚಿಸುವ ಮೂಲಕ ಇಂತಹ ಕೃತ್ಯಗಳನ್ನು ತಡೆಯಬೇಕು ಎನ್ನುವ ಆಗ್ರಹ ಸಾರ್ವಜನಿಕರದ್ದು.

Advertisement

Udayavani is now on Telegram. Click here to join our channel and stay updated with the latest news.

Next