Advertisement

ನಟ ಗೋವಿಂದ – ಕೃಷ್ಣ ಅಭಿಷೇಕ್ ಕುಟುಂಬ ಕಲಹ ಬಹಿರಂಗ

09:48 PM Sep 12, 2021 | Team Udayavani |

ಮುಂಬೈ: ಖ್ಯಾತ ಬಾಲಿವುಡ್ ನಟ ಗೋವಿಂದ ಹಾಗೂ ಅವರ ಸೋದರಳಿಯ ಕೃಷ್ಣ ಅವರ ನಡುವಿನ  ಜಗಳ ಇದೀಗ ಬೀದಿಗೆ ಬಿದ್ದಿದೆ.

Advertisement

ನಟ ಗೋವಿಂದ ಕುಟುಂಬದ ಜೊತೆ ತಮ್ಮ ಪತಿಯ ಜಗಳದ ಬಗ್ಗೆ ಇಂದು ಮಾತನಾಡಿರುವ ಹಾಸ್ಯ ನಟ ಕೃಷ್ಣ ಅವರ ಪತ್ನಿ ಹಾಗೂ ನಟಿ ಕಾಶ್ಮೇರಾ ಶಾ, ಕಳೆದ ಐದು ವರ್ಷಗಳಿಂದ ಈ ಜನರು (ಗೋವಿಂದ್ ಫ್ಯಾಮಿಲಿ) ಜೊತೆಗಿನ ಸಂಬಂಧ ನಾನು ಕಳೆದುಕೊಂಡಿದ್ದೇನೆ. ನನಗೆ ಇವರ ಜಗಳದ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದಾರೆ.

ಇನ್ನು ಇತ್ತೀಚಿಗೆ ‘ದಿ ಕಪಿಲ್ ಶರ್ಮಾ ಶೋ’ನಲ್ಲಿ ಕೃಷ್ಣ ಅಭಿಷೇಕ್ ಇರದಿದ್ದರೆ ಮಾತ್ರ ನಾವು ಬರುತ್ತೇವೆ ಎಂದು ನಟ ಗೋವಿಂದ ಪತ್ನಿ ಸುನೀತಾ ಅಹುಜಾ ಶರತ್ತು ಹಾಕಿದ್ದರಂತೆ. ಹಾಗಾಗಿ ಕೃಷ್ಣ ಅವರು ಗೋವಿಂದ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ‘ನಮ್ಮ ಮಧ್ಯೆ ಇರುವ ಸಮಸ್ಯೆ ಎಂದಿಗೂ ಬಗೆಹರಿಯೋದಿಲ್ಲ, ನನಗೆ ಎಂದಿಗೂ ಕೃಷ್ಣ ಅಭಿಷೇಕ್ ಮುಖ ನೋಡಲು ಇಷ್ಟವಿಲ್ಲ’ ಎಂದು ಸುನೀತಾ ಅಹುಜಾ ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆಯೇ ಗೋವಿಂದ ಹಾಗೂ ಕೃಷ್ಣ ಅಭಿಷೇಕ್ ಸಂಬಂಧ ಮುರಿದು ಬಿದ್ದಿತ್ತು. ಕೃಷ್ಣಾ ಪತ್ನಿ ಕಶ್ಮೆರಾ ನಡವಳಿಕೆಯಿಂದ ಸುನೀತಾ ಅವರಿಗೆ ಬೇಸರ ಆಗಿದೆಯಂತೆ. ಆದರೆ ಸಮಸ್ಯೆ ಏನೂ ಎಂಬುದನ್ನು ಮಾತ್ರ ರಿವೀಲ್ ಮಾಡಿಲ್ಲ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next