Advertisement

ದೇಶದಲ್ಲಿ ದ್ವೇಷದ ವಾತಾವರಣ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ರಾಹುಲ್ 3,000 ಕಿ.ಮೀ. ನಡೆಯಬೇಕಾಯಿತು!

03:02 PM Jan 27, 2023 | Team Udayavani |

ಚೆನ್ನೈ: ದೇಶದಲ್ಲಿ ದ್ವೇಷದ ವಾತಾವರಣ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್ ಮುಖಂಡ, ವಯನಾಡ್ ಸಂಸದ ರಾಹುಲ್ ಗಾಂಧಿ 3,000 ಕಿಲೋ ಮೀಟರ್ ನಡೆಯಬೇಕಾಯಿತು ಎಂದು ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಟೀಕಿಸಿದ್ದಾರೆ.

Advertisement

ಇದನ್ನೂ ಓದಿ:ʼಪಠಾಣ್‌ʼ ಮೋಡಿ: 32 ವರ್ಷದ ಬಳಿಕ ಹೌಸ್‌ ಫುಲ್‌ ಆದ ಕಾಶ್ಮೀರದ ಥಿಯೇಟರ್

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ವಿರುದ್ಧ ವಾಗ್ದಾಳಿ ನಡೆಸಿದ ಅಣ್ಣಾಮಲೈ, ದೇಶದಲ್ಲಿ ಯಾವುದೇ ದ್ವೇಷದ ವಾತಾವರಣ ಇಲ್ಲ ಎಂಬುದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಂತಾಗಿದ್ದು, ಅವರ ಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

ನೂರಾರು ಕಿಲೋ ಮೀಟರ್ ಯಾತ್ರೆಯನ್ನು ಕ್ರಮಿಸಿದ್ದ ನಂತರ ರಾಹುಲ್ ಗಾಂಧಿಯವರು ದೆಹಲಿಯಲ್ಲಿ ನೀಡಿದ್ದ ಹೇಳಿಕೆಯೊಂದರಲ್ಲಿ ತಾನು ಯಾವುದೇ ದ್ವೇಷದ ವಾತಾವರಣ ಕಂಡಿಲ್ಲ ಎಂದು ತಿಳಿಸಿದ್ದಾರೆ. ಹಾಗಾದರೆ ರಾಹುಲ್ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದೇಕೆ? ಎಂದು ಪ್ರಶ್ನಿಸಿದ್ದು, ದ್ವೇಷದ ವಾತಾವರಣ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು 3,000 ಕಿಲೋ ಮೀಟರ್ ಪಾದಯಾತ್ರೆ ನಡೆಸಬೇಕಾಯಿತು ಎಂದು ಅಣ್ಣಾಮಲೈ ಎಎನ್ ಐ ಜೊತೆ ಮಾತನಾಡುತ್ತ ತಿರುಗೇಟು ನೀಡಿದ್ದಾರೆ.

ಪಾದಯಾತ್ರೆ ಎಂಬುದು ವಿಶಾಲ ದೃಷ್ಟಿಕೋನವನ್ನು ಹೊಂದಿರಬೇಕು. ಆದರೆ ನೀವು ಮೋದಿಯವರ ಬಗ್ಗೆ ಅಸಮಾಧಾನಗೊಂಡಿದ್ದರಿಂದ ಯಾತ್ರೆ ಕೈಗೊಂಡಿರುವುದು ಇದರ ಉದ್ದೇಶವಾಗಿದೆ ಎಂದು ಅಣ್ಣಾಮಲೈ ವಾಗ್ದಾಳಿ ನಡೆಸಿದರು.

Advertisement

ಭಾರತ್ ಜೋಡೋ ಯಾತ್ರೆ ದೆಹಲಿ ಪ್ರವೇಶಿಸಿದ್ದ ವೇಳೆ ರಾಹುಲ್ ಗಾಂಧಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ, ಭಾರತ್ ಜೋಡೋ ಯಾತ್ರೆಯಲ್ಲಿ ಶ್ವಾನಗಳು ಕೂಡಾ ಬಂದಿದ್ದವು. ಆದರೆ ಯಾರೂ ಅವುಗಳ ಮೇಲೆ ಕಲ್ಲು ತೂರಾಟ ನಡೆಸಿಲ್ಲ. ಅಷ್ಟೇ ಅಲ್ಲ ಜನರೊಂದಿಗೆ ಹಸು, ಕೋಣ, ಹಂದಿ ಸೇರಿದಂತೆ ಎಲ್ಲವೂ ಪಾದಯಾತ್ರೆ ವೇಳೆ ಬಂದಿದ್ದವು…ಈ ಯಾತ್ರೆ ನಮ್ಮ ಭಾರತದಂತಿದೆ. 2,800 ಕಿಲೋ ಮೀಟರ್ ದೂರದ ನಮ್ಮ ಯಾತ್ರೆಯಲ್ಲಿ ನಾನು ಯಾವುದೇ ದ್ವೇಷ ಅಥವಾ ಹಿಂಸಾಚಾರವನ್ನು ಕಂಡಿಲ್ಲ. ಆದರೆ ನಾನು ಯಾವಾಗ ಟಿವಿಯನ್ನು ಆನ್ ಮಾಡುತ್ತೇನೋ ಆಗ 24ಗಂಟೆಗಳ ಕಾಲವೂ ದ್ವೇಷದ ಸುದ್ದಿಗಳೇ ಬಿತ್ತರವಾಗುತ್ತಿರುತ್ತದೆ ಎಂದು ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next