Advertisement

ಎಲ್ಲದಕ್ಕೂ ಜನಾಂಗೀಯ ಬಣ್ಣ ಬೇಡ: ಸುಷ್ಮಾ

11:32 AM Apr 06, 2017 | Team Udayavani |

ಆಫ್ರಿಕನ್‌ ವಿದ್ಯಾರ್ಥಿಗಳ ಮೇಲೆ ನಡೆದಿರುವುದು “ದ್ವೇಶ ಹಾಗೂ ಜನಾಂಗೀಯ ಹಿನ್ನೆಲೆಯ’ ದಾಳಿ ಎಂಬ ಆಫ್ರಿಕನ್‌ ರಾಯಭಾರ ಕಚೇರಿಯ ಪ್ರತಿಕ್ರಿಯೆಯನ್ನು, ಒಂದು “ದುರ ದೃಷ್ಟಕರ, ನೋವಿನ ಹಾಗೂ ಅಚ್ಚರಿ’ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

Advertisement

ಲೋಕಸಭೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಇತ್ತೀಚೆಗೆ ಆಫ್ರಿಕನ್‌ ವಿದ್ಯಾರ್ಥಿಗಳ ಮೇಲೆ ಗುಂಪೊಂದು ನಡೆಸಿದ ದಾಳಿಯನ್ನು “ಜನಾಂಗೀಯ ದಾಳಿ’ ಎಂದು ಬಿಂಬಿಸುವುದು ಸರಿಯಲ್ಲ. ಜನಾಂಗೀಯ ದಾಳಿಗಳು ಪೂರ್ವನಿಯೋಜಿತವಾಗಿರುತ್ತವೆ. ಆದರೆ ಇದು ಅಂಥ ಪ್ರಕರಣವಲ್ಲ. ವಿದೇಶಿ ವಿದ್ಯಾರ್ಥಿಗಳ ರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ’ ಎಂದು ತಿಳಿಸಿದರು.

ಭಾರತ ಸುಮ್ಮನಿರದು!: ಪಾಕಿಸ್ಥಾನ ಆಕ್ರಮಿತ ಜಮ್ಮಿ ಕಾಶ್ಮೀರವನ್ನು “ಗಿಲಿಟ್‌-ಬಾಲ್ಟಿಸ್ಥಾನ್‌’ ಪ್ರಾಂತ್ಯವೆಂದು ಘೋಷಿಸುವ ಕುರಿತು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವೆ ಸುಷ್ಮಾ ಸ್ವರಾಜ್‌, “ತನ್ನ ಪ್ರಾಂತ್ಯಗಳು ಕೈತಪ್ಪಿ ಹೋಗು ವುದನ್ನು ನೋಡಿಕೊಂಡು ಕೂರುವ ಜಾಯಮಾನ ಭಾರತದ್ದಲ್ಲ’ ಎಂದು ತಿರುಗೇಟು ನೀಡಿದ್ದಾರೆ. 

ಮಾಹಿತಿ ಸೋರಿಕೆಯಾಗಿಲ್ಲ: ಸಚಿವಾಲಯದಿಂದ ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಸೋರಿಕೆ ಯಾಗಿಲ್ಲ ಎಂದು ಕೇಂದ್ರ ಸಹಾಯಕ ಸಚಿವ ಪಿ.ಪಿ.ಚೌದರಿ ಸ್ಪಷ್ಟಪಡಿಸಿದ್ದಾರೆ. ಐಟಿ ಸಚಿವಾಲಯದಿಂದ ಡೆಮೋಗ್ರಾಫಿಕ್‌ ಹಾಗೂ ಬಯೋಮೆಟ್ರಿಕ್‌ ಮಾಹಿತಿ ಸೋರಿಕೆಯಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next