Advertisement

ರಾಜ್ಯದಲ್ಲಿ ಈಗ ಯಡಿಯೂರಪ್ಪನವರ ಬಿಜೆಪಿ ಇಲ್ಲ:ಎಚ್‌.ಡಿ.ಕುಮಾರಸ್ವಾಮಿ

09:23 PM Feb 03, 2023 | Team Udayavani |

ತಿಪಟೂರು: ರಾಜ್ಯದಲ್ಲಿ ಮೋದಿ ಹಾಗೂ ಅಮಿತ್‌ ಶಾ ಅವರ ಬಿಜೆಪಿ ಇದೆಯೇ ಹೊರತು ಬಿ.ಎಸ್‌.ಯಡಿಯೂರಪ್ಪನವರ ಬಿಜೆಪಿ ಇಲ್ಲ. ಮೋದಿ ಮತ್ತು ಶಾ ಅವರು ತೆರಿಗೆ ವಿಧಿಸುವ ಮೂಲಕ ರೈತರು, ಮಹಿಳೆಯರು ಹಾಗೂ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡ ಕೆ.ಟಿ. ಶಾಂತಕುಮಾರ್‌ ಅವರನ್ನು ಜೆಡಿಎಸ್‌ಗೆ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಬಿಜೆಪಿ ರಾಜ್ಯದಲ್ಲಿ ಕಳೆದು ಹೋಗಿದೆ. ಜನಪರ ನಿಲುವು ತಾಳಿರುವ ಜೆಡಿಎಸ್‌ ಅನ್ನು ಲಿಂಗಾಯತ ಸಮಾಜ ಬಂಧುಗಳು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಲಿಂಗಾಯತ ಸಮಾಜದ ಮತದಾರರು ಯಡಿಯೂರಪ್ಪನವರ ಮನವಿಗೆ ಸ್ಪಂದಿಸಿ, ಶಾಸಕ ಬಿ.ಸಿ.ನಾಗೇಶ್‌ಗೆ ಮತ ನೀಡಿ ಸಂಕಟಪಡುವಂತಾಗಿದೆ. ಆದರೆ ಈಗ ಯಡಿಯೂರಪ್ಪನವರ ಮಾತು ಕೇಳಬೇಡಿ ಎಂದು ಹೇಳಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಸಚಿವ ಬಿ.ಸಿ.ನಾಗೇಶ್‌ಗೆ ಮೋದಿ ಚಿಂತೆ, ಸಿದ್ದರಾಮಯ್ಯಗೆ ಸೋನಿಯಾ ಚಿಂತೆ. ಆದರೆ ನಮ್ಮ ಕುಮಾರಣ್ಣನಿಗೆ ರೈತರ ಚಿಂತೆ. ಎರಡೂ ಪಕ್ಷಗಳ ನಾಯಕರು ಮಹಾ ಭ್ರಷ್ಟರಾಗಿ, ಸಿ.ಡಿ. ಹಗರಣಗಳಲ್ಲಿ ಸಿಲುಕಿ ರಾಜ್ಯದ ಜನರನ್ನು ಅವಮಾನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next