Advertisement
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ವಿಪಕ್ಷಗಳ ಒಕ್ಕೂಟದ ನಾಯಕನಾಗಿ ಮತ್ತು ಪ್ರಧಾನಿಯಾಗಿ ರಾಹುಲ್ ಗಾಂಧಿ ಆಗಲಿ ಎಂದು ಹೇಳಿದ್ದಾಗ ಅದಕ್ಕೆ ಮಮತಾ ಆಕ್ಷೇಪ ಮಾಡಿ ದ್ದರು. ಕಾರ್ಯಕ್ರಮದಿಂದ ದೂರ ಉಳಿಯುವುದಕ್ಕೆ ಇದೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಬಿಎಸ್ಪಿ ನಾಯಕಿ ಮಾಯಾವತಿ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ಭಾಗವಹಿಸುವ ಬಗ್ಗೆ ಇನ್ನೂ ತೀರ್ಮಾನ ಪ್ರಕಟಿಸಿಲ್ಲ. ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ ಕೂಡ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳೂ ಆಗಿದ್ದಾರೆ.
Related Articles
Advertisement
ಮಮ್ಮುಟ್ಟಿ, ಲಾಲೇಟ್ಟನ್ ಸ್ಪರ್ಧೆ?ಮಲಯಾಳದ ಜನಪ್ರಿಯ ಸಿನಿಮಾ ನಟರಾಗಿರುವ ಮೋಹನ್ಲಾಲ್, ಸುರೇಶ್ಗೋಪಿ, ಮಮ್ಮುಟ್ಟಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುರೇಶ್ಗೋಪಿ ಬಿಜೆಪಿ ವತಿಯಿಂದ ರಾಜ್ಯಸಭೆಗೆ ನೇಮಕಗೊಂಡಿದ್ದಾರೆ. ತಿರುವನಂತಪುರ ಕ್ಷೇತ್ರದಿಂದ ಬಿಜೆಪಿ ಹುರಿಯಾಳಾಗಿ ಮೋಹನ್ಲಾಲ್ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳದಲ್ಲಿ ಸಿಪಿಎಂನ ಮುಖವಾಣಿ ಯಾಗಿರುವ ಕೈರಳಿ ಚಾನೆಲ್ಗಳ ಅಧ್ಯಕ್ಷ ಮಮ್ಮುಟ್ಟಿ ಎರ್ನಾಕುಳಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹಾಲಿ ಸಂಸದ ಇನೋಸೆಂಟ್ ಚಾಲಕ್ಕುಡಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದು ಅನುಮಾನ . 74ರಲ್ಲಿ ಗೆಲ್ಲುತ್ತೇವೆ: ನಡ್ಡಾ
ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಘೋಷಣೆಯಾದ ಬಳಿಕ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿರುವ ಬಿಜೆಪಿ ನಾಯಕ ಜೆ.ಪಿ.ನಡ್ಡಾ ಲಕ್ನೋದಲ್ಲಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು ಮೈತ್ರಿಕೂಟ ಬಿಜೆಪಿ ಮೇಲೆ ಪರಿಣಾಮ ಬೀರದು. 80 ಸ್ಥಾನಗಳ ಪೈಕಿ 74ರಲ್ಲಿ ಗೆಲ್ಲಲಿದ್ದೇವೆ. ಚುನಾವಣೆ ಎನ್ನುವುದು ಫಿಸಿಕ್ಸ್ ಅಲ್ಲ ಕೆಮೆಸ್ಟ್ರಿ. ಮತದಾರರ ನಡುವಿನ ಕೆಮೆಸ್ಟ್ರಿಯಾಗಿದೆ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ರಣತಂತ್ರಕ್ಕೆ ಪ್ರತಿಯಾದ ಎಲ್ಲಾ ರೀತಿಯ ತಂತ್ರಗಳೂ ನಮ್ಮ ಬಳಿ ಇದೆ. ಅದನ್ನು ಚುನಾವಣೆ ವೇಳೆ ಪ್ರಕಟಿಸುತ್ತೇವೆ ಎಂದಿದ್ದಾರೆ ನಡ್ಡಾ. ಉತ್ತರ ಪ್ರದೇಶದಲ್ಲಿ ಸದ್ಯ 80 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ನಿರ್ಧಾರ ಪ್ರಕಟಿಸಿದ್ದೇವೆ. ನಮ್ಮ ಜತೆ ಮೈತ್ರಿ ಮಾಡಿಕೊಳ್ಳುವ ಪಕ್ಷಗಳಿಗೆ ಕೆಲವು ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ.
ಗುಲಾಂ ನಬಿ ಆಜಾದ್ ಕಾಂಗ್ರೆಸ್ ನಾಯಕ ಪಶ್ಚಿಮ ಬಂಗಾಳದಲ್ಲಿ ನಾಲ್ಕು ಹಂತಗಳ ಕಾಲ ರಥ ಯಾತ್ರೆ ನಡೆಸಲು ರಾಜ್ಯ ಸರಕಾರದ ಅನುಮತಿ ಕೋರಲಿದ್ದೇವೆ. 10-12 ದಿನಗಳ ಕಾಲ ಅದು ನಡೆ ಯಲಿದೆ. ಅನುಮತಿ ಸಿಗಬಹುದು ಎಂಬ ವಿಶ್ವಾಸವಿದೆ.
ಜೈ ಪ್ರಕಾಶ್ ಮಜುಂದಾರ್
ಪಶ್ಚಿಮ ಬಂಗಾಲ ಬಿಜೆಪಿ ನಾಯಕ