Advertisement

ರಾಜ್‌ ಠಾಕ್ರೆ ಅವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ: ಶರದ್‌ ಪವಾರ್‌

09:18 AM Feb 13, 2020 | sudhir |

ಪುಣೆ : ರಾಜ್ಯದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಹಾಗೂ ವಿಧಾನಸಭಾ ಚುನಾವಣೆಯ ಮೊದಲು ಶರದ್‌ ಪವಾರ್‌ ಹಾಗೂ ರಾಜ್‌ ಠಾಕ್ರೆ ಅವರು ಹತ್ತಿರವಾಗಿದ್ದು, ಎಲ್ಲರು ಕಂಡಿದ್ದಾರೆ. ಆದರೆ ಮಹಾವಿಕಾಸ್‌ ಆಘಾಡಿಯ ಸರಕಾರ ರಾಜ್ಯದಲ್ಲಿ ರಚನೆಯಾದ ನಂತರ ಇಬ್ಬರು ನಾಯಕರು ಮತ್ತೆ ಪರಸ್ಪರ ವಿರುದ್ಧವಾಗಿರುವುದು ಕಾಣಿಸಿದೆ. ಪುಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರದ್‌ ಪವಾರ್‌ ಅವರು, ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆ ಅವರ ಬಗ್ಗೆ ಮೋರ್ಚಾದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ರಾಜ್‌ ಠಾಕ್ರೆ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ. ರಾಜ್ಯದ ರಾಜಕೀಯದ ಮೇಲೆ ಈ ರೀತಿಯ ಹೇಳಿಕೆ ಯಾವುದೆ ಪ್ರಭಾವ ಬೀರುವುದಿಲ್ಲ ಎಂದರು.

Advertisement

ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆ ಅವರು ಮೋರ್ಚಾದ ಭಾಷಣದಲ್ಲಿ ನುಸುಳುಕೋರರ ವಿರುದ್ಧ ಮಾತನಾಡುತ್ತಾ ಕಲ್ಲು ಹೊಡೆಯುವವರಿಗೆ ಕಲ್ಲುಗಳಿಂದ ಮತ್ತು ಕತ್ತಿಗೆ ಕತ್ತಿಯಿಂದ ಉತ್ತರಿಸಲಾಗುವುದು ಎಂದು ಹೇಳಿದ್ದರು. ಅವರ ಹೇಳಿಕೆ ಬಗ್ಗೆ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರಲ್ಲಿ ಕೇಳಿದಾಗ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ರಾಜ್ಯದ ರಾಜಕೀಯದ ಮೇಲೆ ಈ ರೀತಿಯ ಹೇಳಿಕೆ ಯಾವುದೆ ಪ್ರಭಾವ ಬೀರುವುದಿಲ್ಲ.

ಕೆಲವರ ಭಾಷಣಗಳನ್ನು ಕೇಳಲು ಜನರು ಬರುತ್ತಾರೆ, ಯಾಕೆಂದರೆ ಅವರ ಭಾಷಣದಿಂದ ಮನೋರಂಜನೆಯಾಗುತ್ತದೆ ಹೊರತು, ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿಯ ಸೋಲಿನ ಸರಣೆ ನಿಲ್ಲುವಂತೆ ಕಾಣುತ್ತಿಲ್ಲ
ಈ ವೇಳೆ ದಿಲ್ಲಿಯಲ್ಲಿಯ ಫಲಿತಾಂಶದ ಬಗ್ಗೆ ಮಾತನಾಡಿದ ಶರದ್‌ ಪವಾರ್‌ ಅವರು, ಬಿಜೆಪಿ ಸೋಲಿನ ಸರಣಿ ಪ್ರಾರಂಭವಾಗಿದೆ, ಅದು ನಿಲ್ಲುವಂತೆ ಕಾಣುತ್ತಿಲ್ಲ. ಬಿಜೆಪಿ ಪ್ರಯತ್ನ ವಿಫಲವಾಗಿದೆ. ಬಿಜೆಪಿಗೆ ಪೈಪೋಟಿ ನೀಡಿದ ಪಕ್ಷವನ್ನು ಸಾರ್ವಜನಿಕರು ಆಯ್ಕೆ ಮಾಡಿದ್ದಾರೆ. ಕೇಜ್ರಿವಾಲ್‌ ಗೆಲ್ಲುತ್ತಾರೆ ಎಂದು ಹೇಳಲಾಗಿತ್ತು. ಆದ್ದರಿಂದ, ಫಲಿತಾಂಶದಿಂದ ನಾನು ವೈಯಕ್ತಿಕವಾಗಿ ಆಶ್ಚರ್ಯಪಡುತ್ತಿಲ್ಲ, ಎಂದು ಹೇಳುತ್ತಾ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next