Advertisement

ಅ.4ರವರೆಗೆ ಬಹುಮತ ಪರೀಕ್ಷೆ ಇಲ್ಲ

09:11 AM Sep 21, 2017 | Team Udayavani |

ಚೆನ್ನೈ: ಹಲವಾರು ತಿರುವುಗಳನ್ನು ಪಡೆಯುತ್ತಿರುವ ತಮಿಳುನಾಡು ರಾಜಕೀಯ ಬೆಳವಣಿಗೆಗಳಿಗೆ ಸದ್ಯ ಮದ್ರಾಸ್‌ ಹೈಕೋರ್ಟ್‌ ತಡೆ ನೀಡಿದೆ. ಟಿಟಿವಿ ದಿನಕರನ್‌ ಗುಂಪಿಗೆ ಸೇರಿರುವ 18 ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್‌ ಆದೇಶಕ್ಕೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್‌, ಇದರ ಬೆನ್ನಲ್ಲೇ ಅ.4ರ ವರೆಗೆ ವಿಶ್ವಾಸಮತ ಯಾಚನೆ ಮಾಡದಂತೆ ತಾಕೀತು ಮಾಡಿದೆ. 

Advertisement

ಒಂದು ರೀತಿಯಲ್ಲಿ ಇದು ಮುಖ್ಯಮಂತ್ರಿ ಪಳನಿಸ್ವಾಮಿ ಸರಕಾರಕ್ಕೆ ಗೆಲುವು ಮತ್ತು ಸೋಲು. 18 ಶಾಸಕರ ಅನರ್ಹತೆ ನಿರ್ಧಾರಕ್ಕೆ ತಡೆ ನೀಡದೇ ಇರುವುದು ಪಳನಿಸ್ವಾಮಿ-ಪನ್ನೀರ್‌ಸೆಲ್ವಂ ಬಣಕ್ಕೆ ಸದ್ಯದ ಮಟ್ಟಿನ ಗೆಲುವು. ಆದರೆ, ಅ.4ರ ವರೆಗೆ ವಿಶ್ವಾಸಮತ ಸಾಬೀತು ಪಡಿಸದಂತೆ ಸೂಚಿಸಿರುವುದು ಸೋಲೇ. ಏಕೆಂದರೆ, ಶಾಸಕರ ಅನರ್ಹತೆ ನಿರ್ಧಾ ರಕ್ಕೆ ತಡೆ ನೀಡದೇ ಇದ್ದುದರಿಂದ ಮುಂದಿನ ದಿನಗಳಲ್ಲಿ ಪಳನಿಸ್ವಾಮಿ ಸರಕಾರ ಅಧಿವೇಶನ ಕರೆದು ವಿಶ್ವಾಸ ಮತ ಸಾಬೀತು ಮಾಡಬಹುದಾಗಿತ್ತು. ಆದರೆ, ಅ.4ರ ವರೆಗೆ ವಿಶ್ವಾಸಮತಕ್ಕಾಗಿ ಅಧಿವೇಶನ ಕರೆಯದಂತೆ ಸೂಚಿಸಿರು ವುದರಿಂದ ಮುಂದಿನ ಆದೇಶದ ವರೆಗೆ ಪಳನಿಸ್ವಾಮಿ ಸರಕಾರ ಕಾಯಲೇಬೇಕು. 

ಅನರ್ಹಗೊಂಡ 18 ಶಾಸಕರ ಪರವಾಗಿ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ಸಲ್ಮಾನ್‌ ಖುರ್ಷಿದ್‌ ಮತ್ತು ದುಷ್ಯಂತ್‌ ದವೆ ವಾದ ಮಂಡಿಸಿದರು. ಈ ವೇಳೆ ಕಪಿಲ್‌ ಸಿಬಲ್‌ ಕರ್ನಾಟಕದಲ್ಲಿ ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ನಡೆದ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿ, ಆಗ ಸುಪ್ರೀಂ ಕೋರ್ಟ್‌ ಸ್ಪೀಕರ್‌ ನಿರ್ಧಾರಕ್ಕೆ ತಡೆ ನೀಡಿದ್ದನ್ನು ಉಲ್ಲೇಖೀಸಿದರು. ಆಗ ಪಳನಿಸ್ವಾಮಿ ಸರಕಾರದ ಪರ ವಕೀಲರು ಆ ಪ್ರಕರಣವೇ ಬೇರೆ, ಇದೇ ಬೇರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next