Advertisement

ಕ್ಷೇತ್ರ ಬದಲಾಯಿಸುವ ಮಾತೇ ಇಲ್ಲ: ಆಂಜನೇಯ

06:25 AM Jan 08, 2018 | |

ಚಿತ್ರದುರ್ಗ: ಅನ್ನ, ಆಶ್ರಯ ನೀಡಿ ರಾಜಕೀಯ ಪುನರ್‌ ಜನ್ಮ ನೀಡಿದ ಹೊಳಲ್ಕೆರೆ ಕ್ಷೇತ್ರ ಬಿಟ್ಟು ಬೇರೆಡೆ ಹೋಗಲ್ಲ
ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ಸ್ಪಷ್ಟಪಡಿಸಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರ ಬದಲಾವಣೆ ಬಗ್ಗೆ ಎದ್ದಿದ್ದ ಊಹಾ ಪೋಹಗಳಿಗೆ ತೆರೆ ಎಳೆದರು. ಸಂಕಷ್ಟ ಪರಿಸ್ಥಿತಿಯಲ್ಲಿ ಕೈ ಹಿಡಿದು ಗೆಲ್ಲಿಸಿ ಶಾಸಕ ಸೇರಿದಂತೆ ಸಚಿವ ಸ್ಥಾನ ನೀಡಿದ್ದು ಹೊಳಲ್ಕೆರೆ ಕ್ಷೇತ್ರದ ಜನರು, ಮತ್ತೆ ಅವರನ್ನು ಬೇಡಿಕೊಂಡು ಅದೇ ಕ್ಷೇತ್ರದಲ್ಲಿ ಗೆದ್ದು ಬರುತ್ತೇನೆ ಎಂದರು. 

ಒಂದು ವೇಳೆ ಹೈಕಮಾಂಡ್‌ ಕ್ಷೇತ್ರ ಬದಲಾವಣೆ ಪ್ರಸ್ತಾಪ ಮಾಡಿದರೂ ಅವರಿಗೆ ಪರಿಸ್ಥಿತಿ ವಿವರಿಸಿ ತಾವು ಹೊಳಲ್ಕೆರೆ ಕ್ಷೇತ್ರದಿಂದಲೇ ಸ್ಪರ್ಧಿಸುವೆ.

ನಾನು ಈ ಮಟ್ಟಕ್ಕೆ ಬೆಳೆಯಲು ಆ ಕ್ಷೇತ್ರದ ಜನತೆ ಕಾರಣವಾಗಿದ್ದು ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾಯಿಸುವ ಮಾತೇ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next