ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ನಲ್ಲಿ ಒಂದೆಡೆ ಅಸಮಾಧಾನ ಸ್ಫೋಟಗೊಂಡರೆ ಇನ್ನೊಂದೆಡೆ ಖಾತೆಗಳಿಗಾಗಿ ಸಚಿವರ ಮಧ್ಯೆ ಪೈಪೋಟಿ ಹೆಚ್ಚುತ್ತಿರುವುದರಿಂದ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಇನ್ನೂ ಖಾತೆಗಳನ್ನು ಹಂಚಿಕೆ ಮಾಡಲು ಸಾಧ್ಯವಾಗಿಲ್ಲ.
ತಮ್ಮ ಪಕ್ಷದ ಸಚಿವರ ಪೈಕಿ ಯಾರಿಗೆ ಯಾವ ಖಾತೆ ಎಂಬುದು ಜೆಡಿಎಸ್ನಲ್ಲಿ ಬಹುತೇಕ ನಿರ್ಧಾರವಾಗಿದೆ.
ಆದರೆ, ಭಿನ್ನಮತದ ಬೇಗುದಿಯನ್ನು ಶಮನ ಮಾಡಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಇನ್ನೂ ಖಾತೆ ಹಂಚಿಕೆ
ಪಟ್ಟಿಯನ್ನು ಮುಖ್ಯಮಂತ್ರಿಗೆ ಕಳುಹಿಸಿಕೊಟ್ಟಿಲ್ಲ.
ಇದರಿಂದಾಗಿ ಪ್ರಮಾಣವಚನ ಕೈಗೊಂಡು 24 ಗಂಟೆ ಕಳೆದರೂ ವಿಧಾನಸೌಧದಲ್ಲಿ ಕೊಠಡಿಗಳ ಹಂಚಿಕೆಯಾದರೂ ಖಾತೆಗಳಿಲ್ಲದ ಸಚಿವರಾಗಿಯೇ ಉಳಿಯುವಂತಾಗಿದೆ. ಮೂಲಗಳ ಪ್ರಕಾರ ಇಂಧನ ಖಾತೆಯನ್ನು ಕಾಂಗ್ರೆಸ್ಗೆ ನೀಡಲಾಗಿದ್ದು, ಅದರ ಬದಲಿಗೆ ಕಂದಾಯ ಖಾತೆ ಜೆಡಿಎಸ್ಗೆ ಸಿಕ್ಕಿದೆ. ಇಂಧನ ಖಾತೆ ಡಿ.ಕೆ.ಶಿವಕುಮಾರ್ ಪಾಲಾಗುವುದು ಬಹುತೇಕ ಖಚಿತ ಎನ್ನಲಾಗಿದೆ.