Advertisement

ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಕೇಸ್ ಹಾಕುವ ದಬ್ಬಾಳಿಕೆಯ ಸರಕಾರ ರಾಜ್ಯದಲ್ಲಿದೆ

12:43 PM Jan 07, 2024 | Kavyashree |

ಹುಬ್ಬಳ್ಳಿ: ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಕೇಸ್ ಹಾಕುವ ದಬ್ಬಾಳಿಕೆಯ ಸರಕಾರ ರಾಜ್ಯದಲ್ಲಿದೆ‌. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಶ್ರೀಕಾಂತ ಪೂಜಾರಿ ಬಂಧನ ಇದಕ್ಕೆ ಉದಾಹರಣೆ‌. ಇವರನ್ನು ಒಳಗಡೆ ಹಾಕಿದ ಅಧಿಕಾರಿ, ಮಂತ್ರಿ ಕ್ಷಮೆ ಕೇಳಲಿಲ್ಲ. ಸರಕಾರದ ನಡೆಯನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಕೇವಲ ಏಳೇ ತಿಂಗಳಲ್ಲಿ ಅಧಿಕಾರದ ಮದ ಹಾಗೂ ದಾಷ್ಟ್ಯ ಹೆಚ್ಚಾಗಿದೆ. ಸರ್ಕಾರದ ವಿರುದ್ದ ನಾವು ಹೋರಾಟ ಮಾಡುತ್ತೇವೆ‌ ಎಂದರು.

ಕಾಂಗ್ರೆಸ್ ಗೆ ರಾಮ ಮಂದಿರ ಆಗಬಾರದು ಎನ್ನುವ ಆಸೆ ಇತ್ತು. ಹರಿಪ್ರಸಾದ್‌ ಅವರು ಗೋಧ್ರಾ ಬಗ್ಗೆ ಮಾತನಾಡುತ್ತಾರೆ. ಅವರ ಕಡೆ ಮಾಹಿತಿ ಇದ್ರೆ ಅವರು ಯಾಕೆ ಮಾಹಿತಿ ಕೊಡತ್ತಿಲ್ಲ. ಹರಿಪ್ರಸಾದ್‌ ಮಾತಾಡಿದ ಮೇಲೆ ಇವರ INDIA ಒಕ್ಕೂಟದ ನಾಲ್ಕೈದು ಜನ ಮಾತನಾಡಿದ್ದರು. ಬಿಜೆಪಿ ಕೋಮುವಾದಿ ಎನ್ನುತ್ತಾರೆ. ಆದರೆ ನಿಜವಾದ ಕೋಮುವಾದಿ ಕಾಂಗ್ರೆಸ್ ಪಕ್ಷ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next