Advertisement

ಮಂಡ್ಯದಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ: ಕುಮಾರಸ್ವಾಮಿ ಆತಂಕ

11:46 AM Apr 08, 2019 | Team Udayavani |

ಉಡುಪಿ: ಮಂಡ್ಯದಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ. ನನ್ನ ಮಗ ನಿಖಿಲ್ ನನ್ನು ಸೋಲಿಸಲು ಎಲ್ಲಾ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದರು.

Advertisement

ಚುನಾವಣಾ ಪ್ರಚಾರದ ನಿಮಿತ್ತ ಉಡುಪಿಗೆ ಬಂದಿರುವ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನೂ ಮುಗಿಸಲೂ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಾನು ಜೆಡಿಎಸ್ ಕಾರ್ಯಕರ್ತರ ಮೇಲೆ ಅವಲಂಬಿತನಾಗಿದ್ದೇನೆ ಎಂದರು.

ಮೋದಿ ಘೋಷಣೆ ಯುವಕರಿಗೆ ಶೋಕಿ: ಕರಾವಳಿಯಲ್ಲಿ ಮೋದಿ ಅಲೆಯ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಯುವಕರಿಗೆ ಮೋದಿ, ಮೋದಿ ಎಂದು ಘೋಷಣೆ ಮಾಡುವುದು ಶೋಕಿಯಾಗಿ ಬಿಟ್ಟಿದೆ. ಹೀಗೆ ಘೋಷಣೆ ಕೂಗುವವರಿಗೆ ಮೋದಿ ಏನು ಮಾಡಿದ್ದಾರೆ? ಮೋದಿ ಒಬ್ಬರೆ ದೇಶ ರಕ್ಷಣೆ ಮಾಡಿದ್ದಾ? ವಾಜಪೇಯಿ ದೇಶದ ರಕ್ಷಣೆ ಮಾಡಿಲ್ವ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next