Advertisement

ಹೀಗೂ ಉಂಟು : ಕುಂದಾಪುರದಿಂದ ನಾಲ್ವರು ಶಾಸಕರು!

08:41 PM Mar 09, 2023 | Team Udayavani |

ಕುಂದಾಪುರ: ಎಲ್ಲ ಕ್ಷೇತ್ರಗಳಲ್ಲಿ ಒಬ್ಬೊಬ್ಬರೇ ಶಾಸಕರು. ಆದರೆ ಕುಂದಾಪುರದವರು ಮಾತ್ರ ನಾಲ್ವರು. ಅಂದರೆ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶಾಸಕರು. ಆದರೆ ಈ ಅವಧಿಯಲ್ಲಿ ಕುಂದಾಪುರ ತಾಲೂಕಿನ ಮತ್ತೂ ಮೂವರು ಮಂದಿ ಶಾಸಕರಾಗಿದ್ದಾರೆ. ಒಟ್ಟಿಗೆ ನಾಲ್ವರು ಶಾಸಕರು ಕುಂದಾಪುರದವರು. ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡಿರುವುದು ಹೊರ ಕ್ಷೇತ್ರಗಳನ್ನು.

Advertisement

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಹೊರತುಪಡಿಸಿ, ಬೈಂದೂರು ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿ.ಎಂ. ಸುಕುಮಾರ ಶೆಟ್ಟಿಯವರೂ ಕುಂದಾಪುರ ತಾಲೂಕಿನ ಬೆಳಾಲದವರು. ಮಂಗಳೂರು ದಕ್ಷಿಣವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ಡಿ. ವೇದವ್ಯಾಸ ಕಾಮತ್‌ ಮೂಲತಃ ಕುಂದಾಪುರದ ಸಿದ್ಧಾಪುರದವರು. ಹಾಗೆಯೇ ಮೂಲತಃ ಕುಂದಾಪುರದವರಾದ ಡಾ| ವೈ. ಭರತ್‌ ಶೆಟ್ಟಿ ಅವರು ಮಂಗಳೂರು ಉತ್ತರ ಕ್ಷೇತ್ರದ ಶಾಸಕ. ಇನ್ನೂ ವಿಶೇಷವೆಂದರೆ ನಾಲ್ವರೂ ಒಂದೇ ಪಕ್ಷ ಬಿಜೆಪಿಯ ಶಾಸಕರು.

~ಲಕ್ಷ್ಮೀ

Advertisement

Udayavani is now on Telegram. Click here to join our channel and stay updated with the latest news.

Next