Advertisement

ಮಕ್ಕಂದೂರು, ಮೊಣ್ಣಂಗೇರಿ ನಿವಾಸಿಗಳಲ್ಲಿ ಆತಂಕ; ನೆರವಿನ ನಿರೀಕ್ಷೆ

06:10 AM Jul 23, 2018 | |

ಮಡಿಕೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ  ಗಾಳಿ, ಮಳೆಗೆ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾಗಿದ್ದು, ಕೋಟ್ಯಂತರ ರೂ.ನಷ್ಟ ಸಂಭವಿಸಿದೆ. ಇದರ ನಡುವೆಯೇ ಕೆಲವು ಗ್ರಾಮಗಳಲ್ಲಿ ಭೂಮಿ ಬಾಯಿ ಬಿಡತೊಡಗಿದೆ.

Advertisement

ಮಡಿಕೇರಿ ತಾಲೂಕಿನ ಮಕ್ಕಂದೂರು ಹಾಗೂ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಕಿ.ಮೀ. ನಷ್ಟು ದೂರ ಭೂಮಿ ಬಿರುಕು ಬಿಟ್ಟಿದ್ದು, ದಿನದಿಂದ ದಿನಕ್ಕೆ ಇದರ ದೂರ ವ್ಯಾಪಿಸುತ್ತಲೇ ಇದೆ. ಮಕ್ಕಂದೂರು ದೇವಾಲಯದಿಂದ ಸ್ವಲ್ಪ ದೂರದಲ್ಲಿ ಭೂಮಿ ಬಾಯಿ ಬಿಡುತ್ತಿರುವುದರಿಂದ ಮಂಜುನಾಥ್‌ ಅ‌ವರಿಗೆ ಸೇರಿದ ಹಂಚಿನ ಮನೆ ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು, ಅಪಾಯದ ಮುನ್ಸೂಚನೆಯನ್ನು ನೀಡಿದೆ. ಸುಮಾರು 15 ಲಕ್ಷ ರೂ.ವೆಚ್ಚದ ಈ ಮನೆ ಅಡಿಪಾಯದಿಂದಲೇ ಬಿರುಕು ಬಿಟ್ಟು ಮೇಲ್ಚಾವಣಿಯವರೆಗೂ ಗೋಡೆ ಬೀಳುವ ಸ್ಥಿತಿಯಲ್ಲಿದೆ. ಮನೆಯ ಪಕ್ಕದಲ್ಲಿರುವ ತೋಟದಿಂದಲೇ ಭೂಮಿ ಬಿರುಕು ಬಿಟ್ಟಿದ್ದು, ಇದು ಮನೆಯ ಭಾಗವನ್ನೂ ವ್ಯಾಪಿಸಿದೆ.

ಮಂಜುನಾಥ್‌ ಅವರ ಅನುಭವದ ಪ್ರಕಾರ ಜು.9 ರಂದು ಮಕ್ಕಂದೂರು ಭಾಗದಲ್ಲಿ ಲಘು ಭೂಕಂಪನವಾದ ಅನಂತರ ಭೂಮಿಯಲ್ಲಿ ಬಿರುಕು ಹೆಚ್ಚಾಗಿದೆ. 7 ವರ್ಷಗಳ ಹಿಂದೆ ಇದೇ ರೀತಿ ಭೂಮಿ ಕಂಪಿಸಿ ಸಣ್ಣಪುಟ್ಟ ಬಿರುಕು ಕಾಣಿಸಿಕೊಂಡಿತ್ತು. ಆದರೆ ಈ ಬಾರಿಯ ಭೂಕಂಪನ ಬಲವಾಗಿದ್ದ ಕಾರಣ ಮತ್ತು ಅತಿ ಮಳೆಯಿಂದ ಮನೆಯೇ ಕುಸಿಯುವ ಹಂತದಲ್ಲಿದೆ ಎಂದು ಮಂಜುನಾಥ್‌ ಬೇಸರ ವ್ಯಕ್ತಪಡಿಸಿದ್ದಾರೆ.
 
2ನೇ ಮೊಣ್ಣಂಗೇರಿಯಲ್ಲೂ 
ಮತ್ತೂಂದೆಡೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಎರಡನೇ ಮೊಣ್ಣಂಗೇರಿಯಲ್ಲಿ  ಭೂಮಿ ಬಾಯೆ¤ರೆದಿದೆ. ಈ ಹಿಂದೆ ಬಿರುಕುಬಿಟ್ಟ ಸ್ಥಳದಲ್ಲಿಯೇ ಭೂಮಿ ಬಿರುಕು ಬಿಟ್ಟು ಆತಂಕ ಮೂಡಿಸಿದೆ.

ಬೆಟ್ಟ-ಗುಡ್ಡಗಳಿಂದ ಕೂಡಿರುವ ಪ್ರದೇಶವಾಗಿರುವ ಎರಡನೇ ಮೊಣ್ಣಂಗೇರಿ ಯಲ್ಲಿ ಭೂಮಿ ಸುಮಾರು ಎರಡು ಕಿ.ಮೀ ವರೆಗೆ ಬಿರುಕುಬಿಟ್ಟಿದೆ. ಮೂರು ದಿನಗಳ ಹಿಂದೆ ಸಣ್ಣದಾಗಿ ಬಿರುಕು ಬಿಟ್ಟಂತೆ ಗೋಚರಿಸಿದ ಭೂಮಿಯಲ್ಲಿ ಈಗ ದೊಡ್ಡದಾಗಿ ಬಿರುಕು ಕಾಣಿಸಿಕೊಂಡಿದೆ. ಕಾಂಕ್ರೀಟ್‌ ರಸ್ತೆ ಕೂಡ ಸೀಳಿ ಹೋಗಿದ್ದು, ಸುಮಾರು 4 ಇಂಚುಗಳಷ್ಟು ಅಗಲದಲ್ಲಿ ಬಿರುಕು ಬಿಟ್ಟಿದೆ. ಸ್ಥಳೀಯ ನಿವಾಸಿ ಬಾಬು ಪೂಜಾರಿ ಎಂಬುವವರ ಮನೆಯ ಅಂಗಳದ ಮೂಲಕ ಬಿರುಕು ಮೂಡಿದ್ದು, ಮನೆಗೆ ಯಾವುದೇ ಹಾನಿಯಾಗಿಲ್ಲ.

2013ರಲ್ಲಿ ಕೂಡ ಇದೇ ಪ್ರದೇಶದ ರಸ್ತೆಯಲ್ಲಿ ಭಾರೀ ಬಿರುಕು ಕಾಣಿಸಿ ಕೊಂಡು, ಕೆಲವು ಮನೆಗಳು ಬಿರುಕು ಬಿಟ್ಟಿದ್ದವು. ಆದರೆ ಈ ಬಾರಿ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿಲ್ಲ. ಸ್ಥಳಕ್ಕೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ರೇೆಷ್ಮಾ  ತಹಶೀಲ್ದಾರ್‌ ಕುಸುಮಾ ಹಾಗೂ ಗ್ರಾಮಾಂತರ ಠಾಣಾ—ಕಾರಿ ಚೇತನ್‌ ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಅತಿವೃಷ್ಟಿ ಆತಂಕ ಇನ್ನೂ ಇದೆ 
ಜಿಲ್ಲೆಯಲ್ಲಿ ಗಾಳಿ, ಮಳೆ ಕಡಿಮೆ ಯಾಗಿದ್ದರೂ ಮಡಿಕೇರಿ ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ  ಶೀತಗಾಳಿ, ಮಳೆ ಗ್ರಾಮೀಣ ಭಾಗದಲ್ಲಿ ಆತಂಕವನ್ನು ಹೆಚ್ಚಿಸಿದೆ. ಕಳೆದ ಒಂದು ತಿಂಗಳ ಮಹಾಮಳೆಯಿಂದ ಭೂಮಿ ಮೆದುವಾಗಿ ಅಪಾಯದಂಚಿನಲ್ಲಿದೆ. ಪರಿಸ್ಥಿತಿ ಹೀಗಿರುವಾಗಲೇ ನಿರಂತರ ಸಾಧಾರಣ ಮಳೆಯಾಗುತ್ತಿರುವುದರಿಂದ ಭೂಮಿಯಲ್ಲಿ ಬಿರುಕು ಹೆಚ್ಚಾಗುತ್ತಿದೆ. ಗ್ರಾಮೀಣರಲ್ಲಿ ಅವೃಷ್ಟಿಯ ಆತಂಕ ಮುಂದುವರೆದಿದ್ದು, ನುರಿತ ಅಧಿಕಾರಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.  

ಜಿ.ಪಂ.ಅಧ್ಯಕ್ಷರ ಭೇಟಿ,ಪರಿಶೀಲನೆ
ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್‌ ಸ್ಥಳಕ್ಕೆ ಭೇಟಿ ನೀಡಿದ್ದು, ಅಂತರ್ಜಲ ಮಟ್ಟ ಹೆಚ್ಚಾಗಿ, ಜಲ ಉಕ್ಕುತ್ತಿರುವುದರಿಂದ ಭೂಮಿ ಬಿರುಕು ಬಿಡುತ್ತಿದೆ ಮತ್ತು ಮನೆಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಕ್ಕಂದೂರು ಗ್ರಾ.ಪಂ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡ ಭೇಟಿ ನೀಡಿದ್ದು, ಮಂಜುನಾಥ್‌ ಅವರಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಮನೆಯನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಮಂಜುನಾಥ್‌ ದು:ಖ ವ್ಯಕ್ತಪಡಿಸಿದ್ದಾರೆ. 

 ಅಂತರ್ಜಲ ಕಾರಣ 
ಅಧಿಕ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡಿದೆ, ಮಳೆ ಕಡಿಮೆಯಾದ ಬಳಿಕ ಯಥಾ ಸ್ಥಿತಿಗೆ ಮರಳಲಿದೆ  ಕಳೆದ ವರ್ಷದ ಮಳೆಗೂ ಹೀಗೆ ಆಗಿತ್ತು 
– ರೇಷ್ಮಾ
ಭೂ ,ಗಣಿ ವಿಜ್ಞಾನ ಇಲಾಖೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next