Advertisement

“ದೇಶದಲ್ಲಿ ಈಗ ಹೊರಗಿನವರಿಲ್ಲ”: RSS ಸರಸಂಘಚಾಲಕ ಮೋಹನ್‌ ಭಾಗವತ್‌

11:46 PM Jun 02, 2023 | Team Udayavani |

ನಾಗಪುರ‌: ಭಾರತವು ಅನೇಕ ಶತಮಾನಗಳಿಂದ ಮುಸಲ್ಮಾನರ ಸಂಪ್ರ ದಾಯವನ್ನು ಮತ್ತು ಅವರ ಪೂಜಾ ಪದ್ಧತಿಯನ್ನು ರಕ್ಷಿಸಿಕೊಂಡು ಬಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‌ಎಸ್‌ಎಸ್‌) ಸರಸಂಘಚಾಲಕರಾದ ಮೋಹನ್‌ ಭಾಗವತ್‌ ಹೇಳಿದ್ದಾರೆ. ಮಹಾರಾಷ್ಟ್ರದ ನಾಗಪುರ‌ದ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಯಲ್ಲಿ ನಡೆದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಇತಿಹಾಸದ ಕೆಲವು ಘಟನೆಗಳು ಮತ್ತು ಕೆಲವರ ಅಹಂಕಾರದ ಕಾರಣ, ಹಿಂದೂ-ಮುಸ್ಲಿಮರ ನಡುವೆ ಏಕತೆಯು ವ್ಯಕ್ತವಾಗದಂತೆ ತಡೆಯುತ್ತಿದೆ’ ಎಂದು ದೂರಿದ್ದಾರೆ. “ಕೆಲವು ಶತಮಾನಗಳ ಹಿಂದೆ ಹೊರಗಿನ ದೇಶಗಳಿಂದ ನಮ್ಮ ದೇಶಕ್ಕೆ ಅನೇಕ ಸಮುದಾಯಗಳು ಬಂದಿದ್ದವು. ನಾವು ಅವರೊಂದಿಗೆ ಹೋರಾಡಿದೆವು ಮತ್ತು ಅವರು ಇಲ್ಲಿಂದ ಹೊರಟು ಹೋದರು. ಈಗ ದೇಶದಲ್ಲಿ ಇರುವವರು ಎಲ್ಲರೂ ಇಲ್ಲಿನವರೇ’ ಎಂದು ಪ್ರತಿಪಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next