Advertisement

ರಾಜ್ಯದಲ್ಲಿದ್ದಾರೆ 46,660 ಮಾಜಿ ದೇವದಾಸಿಯರು; ಸಚಿವ ಹಾಲಪ್ಪ ಆಚಾರ್‌

08:55 PM Sep 23, 2022 | Team Udayavani |

ವಿಧಾನಸಭೆ: ರಾಜ್ಯದಲ್ಲಿ 46,660 ಮಾಜಿ ದೇವದಾಸಿಯರಿದ್ದು, ಅವರಿಗೆ ಪ್ರತಿ ತಿಂಗಳು 1500 ಪಿಂಚಣಿ ನೀಡಲಾಗುತ್ತಿದೆ. 2007-08ರಲ್ಲಿ ದೇವದಾಸಿ ಮಹಿಳೆಯರ ಸಮೀಕ್ಷೆ ನಡೆಸಲಾಗಿದ್ದು, ತದನಂತರ ಯಾವುದೇ ಸಮೀಕ್ಷೆ ನಡೆಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.

Advertisement

ಬಿಜೆಪಿ ಸದಸ್ಯ ಪಿ.ರಾಜೀವ್‌ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಇಲಾಖೆಯ ಆದಾಯೋತ್ಪನ್ನಕರ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಧನ ಯೋಜನೆಯಡಿ ತಲಾ 30 ಸಾವಿರ ನೀಡಲಾಗುತ್ತಿದೆ. ನಿವೇಶನ ರಹಿತ ಮಾಜಿ ದೇವದಾಸಿಯರಿಗೆ ರಾಜೀವ್‌ ಗಾಂಧಿ ಗ್ರಾಮೀಣಾಭಿವೃದ್ಧಿ ವಸತಿ ನಿಗಮದ ಮೂಲಕ ವಸತಿ ನಿರ್ಮಿಸಲಾಗುತ್ತಿದೆ. ಕಾನೂನು ಅರಿವು, ಆರೋಗ್ಯ ಶಿಬಿರ ನಡೆಸುತ್ತಿದ್ದೇವೆ. ಮಾಜಿ ದೇವದಾಸಿಯರ ಮಕ್ಕಳ ಕಲ್ಯಾಣಕ್ಕಾಗಿ ಯಾವುದೇ ಯೋಜನೆ ರೂಪಿಸಿಲ್ಲ ಮತ್ತು ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಲು ಯಾವುದೇ ಯೋಜನೆ ಇರುವುದಿಲ್ಲ ಎಂದರು.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ವಿವಾಹ ಪ್ರೋತ್ಸಾಹಧನ ಯೋಜನೆಯೂ ಇಲ್ಲ. ಮಾಜಿ ದೇವದಾಸಿಯರಿಂದ ನಿಗಮಕ್ಕೆ ಬಂದಿರುವ ಪ್ರಸ್ತಾವನೆ ಆಧಾರದಲ್ಲಿ 2 ಎಕರೆ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ 2019ರಿಂದ ಸಮಾಜ ಕಲ್ಯಾಣ ಇಲಾಖೆಯ ಅಭಿಪ್ರಾಯ ಕೋರಿ ಪತ್ರ ವ್ಯವಹಾರ ನಡೆಸುತ್ತಿದ್ದೇವೆ. ಇಲಾಖೆಯ ಅಭಿಪ್ರಾಯ ಆಧಾರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next