Advertisement

ತೆಕ್ಕಟ್ಟೆ: ಮಾರುತಿ ಸ್ವಿಫ್ಟ್‌ ಕಾರು ಢಿಕ್ಕಿ ಹೊಡೆದು ಪಾದಚಾರಿ ಸಾವು

10:53 PM Feb 20, 2023 | Team Udayavani |

ತೆಕ್ಕಟ್ಟೆ: ಇಲ್ಲಿನ ರಾ.ಹೆ.66 ಪ್ರಮುಖ ಸರ್ಕಲ್‌ನ ಸಮೀಪ ಮಾರುತಿ ಸ್ವಿಫ್ಟ್‌ ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲಿಯೇ ಅಸುನೀಗಿದ ಘಟನೆ ಫೆ.20ರಂದು ರಾತ್ರಿ ಗಂಟೆ 7.30ರ ಸುಮಾರಿಗೆ ಸಂಭವಿಸಿದೆ. ಇಲ್ಲಿನ ತೆಕ್ಕಟ್ಟೆ ತೋಟದಬೆಟ್ಟು ನಿವಾಸಿ ಅಶೋಕ್‌ ಮೊಗವೀರ (49) ಮೃತ ದುರ್ದೈವಿ.

Advertisement

ಮಣಿಪಾಲದಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಮಾರುತಿ ಸ್ವಿಫ್ಟ್‌ ಕಾರು ನೇರವಾಗಿ ಬಂದು ಪಾದಚಾರಿಗೆ ಢಿಕ್ಕಿಯಾಗಿದ್ದು ಪರಿಣಾಮ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ . ಅಪಘಾತದ ತೀವ್ರತೆಗೆ ಸಮೀಪದಲ್ಲಿ ಸಾಗುತ್ತಿದ್ದ ಬೀಜಾಡಿ ಅರಸರಬೆಟ್ಟು ನಿವಾಸಿ ಮಹಿಳೆಯೋರ್ವರಿಗೂ ಕೂಡಾ ಕಾರು ಬಂದು ತಗುಲಿದ್ದು, ಪರಿಣಾಮ ಸಣ್ಣಪುಟ್ಟ ಗಾಯಗಳಾಗಿ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ಕೋಟ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಮಧು ಬಿ.ಇ ಹಾಗೂ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕತ್ತಲ ಹೆದ್ದಾರಿ: ರಾ.ಹೆ.66 ತೆಕ್ಕಟ್ಟೆ ಪ್ರಮುಖ ಭಾಗದಲ್ಲಿ ಪ್ರಖರ ದಾರಿದೀಪದ ಸಮಸ್ಯೆಗಳಿರುವ ಪರಿಣಾಮ ರಾತ್ರಿ ವೇಳೆಯಲ್ಲಿ ಸ್ಥಳೀಯರು ರಸ್ತೆಯ ಒಂದೆಡೆಯಿಂದ ಮತ್ತೂಂದೆಡೆಗೆ ತೆರಳುವಾಗ ಪ್ರಮುಖ ಮಾರ್ಗದಲ್ಲಿ ಸಾಗುವ ವಾಹನ ಸವಾರರಿಗೆ ಗೋಚರವಾಗದೇ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದೆ. ಈ ಕುರಿತು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದು ವರೆಗೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next