Advertisement

ತೆಕ್ಕಟ್ಟೆ N.H-66: ಕೆಟ್ಟು ನಿಂತ ಕಂಟೈನರ್‌ಗೆ ಹಿಂದಿನಿಂದ ಕಾರು ಢಿಕ್ಕಿ : ಜಖಂ

09:13 PM Apr 19, 2023 | Team Udayavani |

ತೆಕ್ಕಟ್ಟೆ : ಇಲ್ಲಿನ ತೆಕ್ಕಟ್ಟೆ ರಾ.ಹೆ.66 ಕೆನರಾ ಬ್ಯಾಂಕ್‌ ಸಮೀಪ ರಸ್ತೆಯ ಮೇಲೆ ಕೆಟ್ಟು ನಿಂತ ಕಂಟೈನರ್‌ಗೆ ಹಿಂದಿನಿಂದ ಬಂದ ಮಾರುತಿ ಎಸ್‌ ಕ್ರಾಸ್‌ ಕಾರು ನೇರವಾಗಿ ಬಂದು ಢಿಕ್ಕಿ ಯಾಗಿ ಸಂಪೂರ್ಣ ಜಖಂಗೊಂಡಿದ್ದು, ಕಾರು ಚಾಲಕ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ಎ.19 ರಂದು ಬೆಳಗ್ಗೆ ಗಂಟೆ 9ರ ಸುಮಾರಿಗೆ ಸಂಭವಿಸಿದೆ .

Advertisement

ಎಂದಿನಂತೆ ಬನ್ನಾಡಿ ಸೋಮನಾಥ ಹೆಗ್ಡೆ ಅವರು ಬನ್ನಾಡಿಯಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಸೆಲ್ಫ್ ಸಮಸ್ಯೆಯಿಂದಾಗಿ ಕೆಟ್ಟು ನಿಂತ ಕಂಟೈನರ್‌ಗೆ ನೇರವಾಗಿ ಬಂದು ಢಿಕ್ಕಿ ಹೊಡೆದಿದ್ದಾರೆ. ಘಟನೆಯ ತೀವ್ರತೆಗೆ ಕಾರಿನ ಏರ್‌ಬ್ಯಾಗ್‌ಗಳು ತೆರೆದಿದ್ದು, ಸಂಪೂರ್ಣ ಜಖಂಗೊಂಡಿದೆ.

ಸಾರ್ವಜನಿಕರ ಸಹಕಾರ : ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಹಾಗೂ ಕುಂದಾಪುರ ವಕೀಲರ ಸಂಘದ ಸದಸ್ಯರು ರಾ.ಹೆ.66ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಿಂದ ಟಿಪ್ಪರ್‌ ಲಾರಿಯ ಸಹಾಯದಿಂದ ವಾಹನಗಳ ತೆರವು ಕಾರ್ಯದಲ್ಲಿ ಶ್ರಮಿಸಿದರು. ಅದೃಷ್ಟವಶಾತ್‌ ಯಾವುದೇ ಪ್ರಾಣಾಹಾನಿ ಸಂಭವಿಸಲಿಲ್ಲ. ಘಟನಾ ಸ್ಥಳಕ್ಕೆ ಕೋಟ ಪೊಲೀಸ್‌ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next