Advertisement

ಕಳವು ಯತ್ನ: ಆರೋಪಿಗಳು ಪರಾರಿ

09:57 AM Nov 06, 2021 | Team Udayavani |

ಬೆಂಗಳೂರು: ಚಾಮರಾಜಪೇಟೆಯ ಮಕ್ಕಳಕೂಟ ಉದ್ಯಾನದ ಪಕ್ಕದಲ್ಲಿರುವ ಡಾ. ರಾಜ್‌ಕುಮಾರ್‌ ಹಾಗೂ ಡಾ. ಅಂಬರೀಶ್‌ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಭವನದೊಳಗೆ ನುಗ್ಗಿದ ಇಬ್ಬರು ಕಳ್ಳರು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಳವು ಮಾಡಲು ಯತ್ನಿಸಿರುವ ಘಟನೆ ಗುರುವಾರ ನಡೆದಿದೆ.

Advertisement

ಆರೋಪಿಗಳ ಹಿಡಿಯಲು ಬಂದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ತಳ್ಳಿ ಪರಾರಿಯಾಗಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಕಲಾಭವನದ ಹಿಂಭಾಗದ ಕಾಂಪೌಂಡ್‌ ಮೂಲಕ ಕಲಾಭವನದ ಆವರಣಕ್ಕೆ ಬಂದಿ ರುವ ಕಳ್ಳರು, ಶೌಚಾಲಯದ ಕಿಟಕಿ ಗಾಜುಗಳನ್ನು ತೆಗೆದು ಒಳನುಸುಳಿದ್ದಾರೆ.

ಇದನ್ನೂ ಓದಿ;- ಮಳೆ: ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸೂಚನೆ

ನಂತರ ಸಿಸಿ ಕ್ಯಾಮರಾದ ವೈಯರ್‌ ಕಟ್‌ ಮಾಡಿದ್ದು, ಎಲೆಕ್ಟ್ರಾನಿಕ್‌ ವೈಯರ್‌ ಹಾಗೂ ಪೈಪ್‌ಗ್ಳನ್ನು ಕಳುವಿಗೆ ಯತ್ನಿಸಿದ್ದಾರೆ. ಶಬ್ದ ಕೇಳಿ ಒಳಗೆ ಸೆಕ್ಯೂರಿಟಿ ಗಾರ್ಡ್‌ಬಂದಾಗ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕಳವಿಗೆ ತಂದಿದ್ದ ಸುತ್ತಿಗೆ, ವೈಯರ್‌ ಕಟ್ಟರ್‌ ಮತ್ತು ಇತರೆ ವಸ್ತುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ವ್ಯವಸ್ಥಾಪಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next