Advertisement

ಹೊಸಪೇಟೆ: ಖಾರದ ಪುಡಿ ಎರಚಿ 6 ಲಕ್ಷ ದೋಚಿದ ಕಳ್ಳರು

11:13 AM Sep 14, 2022 | Team Udayavani |

ಹೊಸಪೇಟೆ: ಬ್ಯಾಂಕಿಗೆ ಹಣ ಜಮಾ ಮಾಡಲು ಹೊರಟ ವ್ಯಕ್ತಿಯೊಬ್ಬರ ಮುಖಕ್ಕೆ ಕಳ್ಳರು ಖಾರದ ಪುಡಿ ಎರಚಿ 6 ಲಕ್ಷ ರೂ ದೋಚಿ ಪರಾರಿಯಾದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿಯಲ್ಲಿ ಬುಧವಾರ ನಡೆದಿದೆ.

Advertisement

ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಪಟ್ಟಣ  ಅನ್ವೇರಿ ಚಿನ್ನದ ಅಂಗಡಿಯ ಗುಮಾಸ್ತ ಸಂತೋಷ್ ಎಂಬುವವರು  ಬ್ಯಾಂಕ್ ಗೆ ಹಣ ಜಮಾ ಮಾಡಲು ಹೊರಟ ವೇಳೆ ಇದನ್ನು ಗಮನಿಸಿದ ಕಳ್ಳರು, ಕಣ್ಣಿಗೆ ಖಾರದ ಪುಡಿ ಎರಚಿ 6 ಲಕ್ಷ ರೂ ಹಣ ದೋಚಿ,‌ ಪರಾರಿಯಾಗಿದ್ದಾರೆ.

ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿಟ್ಲಪಡ್ನೂರು : ಜಾಗದ ವಿಚಾರದಲ್ಲಿ ಜಗಳ, ಸಹೋದರನ ಕೊಲೆಯಲ್ಲಿ ಅಂತ್ಯ

Advertisement

Udayavani is now on Telegram. Click here to join our channel and stay updated with the latest news.

Next