Advertisement

ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್‌ ಮನೆಯಲ್ಲಿ ಕೆಲಸಗಾರನಿಂದಲೇ ಕಳ್ಳತನ

03:54 PM Aug 02, 2022 | Team Udayavani |

ಬೆಂಗಳೂರು: ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರ ಬೆಂಗಳೂರಿನ ನಿವಾಸದಲ್ಲಿ ಸಾವಿರಾರು ರೂ.ಮೌಲ್ಯದ ವಿದೇಶಿ ಕರೆನ್ಸಿಗಳು ಹಾಗೂ ಬ್ರ್ಯಾಂಡೆಡ್‌ ಕಂಪನಿಯ ವಾಚ್‌ಗಳನ್ನು ಕಳವು ಮಾಡಿದ ಕೆಲಸಗಾರ ಸದಾಶಿವನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಒಡಿಶಾ ಮೂಲದ ಜಯಂತ್‌ಕುಮಾರ್‌ ದಾಸ್‌(32) ಬಂಧಿತ. ಆರೋಪಿಯಿಂದ ವಿದೇಶಿ ಕರೆನ್ಸಿಗಳು, ವಾಚ್‌ಗಳು ಹಾಗೂ ನಗದು ವಶಕ್ಕೆ ಪಡೆಯಲಾಗಿದೆ. ಕೆಲ ವರ್ಷಗಳಿಂದ ಎಂ.ಬಿ.ಪಾಟೀಲ್‌ ಅವರ ಮನೆಯಲ್ಲಿ ಐರನ್‌ ಲಾಂಡ್ರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿ, ಒಂದು ತಿಂಗಳ ಹಿಂದೆ ಮನೆಯಲ್ಲಿದ್ದ 50 ಸಾವಿರ ರೂ. ಮೌಲ್ಯದ ಆರು ವಿವಿಧ ಕಂಪನಿಯ ವಾಚ್‌ಗಳು, ಒಂದು ಮೊಬೈಲ್‌ ಮತ್ತು ವಿದೇಶಿ ಕರೆನ್ಸಿಗಳು ಒಟ್ಟು 1.30 ಲಕ್ಷ ರೂ. ಮೌಲ್ಯದ ವಸ್ತುಗಳು ಕಳವು ಮಾಡಿದ್ದ. ಈ ಬಗ್ಗೆ ಕೆಲಸಗಾರರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಿದ್ದು ಎಂಬುವರು ಪ್ರಶ್ನಿಸಿದಾಗ ಆರೋಪಿ ಸೇರಿದಂತೆ ಯಾವ ಕೆಲಸಗಾರರೂ ಒಪ್ಪಿಕೊಂಡಿರಲಿಲ್ಲ. ಆದರೆ, ಪೊಲೀಸರಿಗೆ ದೂರು ನೀಡವುದಾಗಿ ಬೆದರಿಕೆ ಹಾಕಿದ್ದ ಜಯಂತ್‌ ಕುಮಾರ್‌

ದಾಸ್‌ ಮನೆ ಖಾಲಿ ಮಾಡಿಕೊಂಡು ಒಡಿಶಾಗೆ ಪರಾರಿಯಾಗಿದ್ದ. ಈ ಸಂಬಂಧ ಸಿದ್ದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಒಡಿಶಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next