Advertisement

Panchkula Home: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನ… ತಾಯಿಯಿಂದ ದೂರು

08:37 AM Feb 17, 2024 | Team Udayavani |

ಮುಂಬಯಿ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಪಂಚಕುಲದ ಎಂಡಿಸಿ ಸೆಕ್ಟರ್ 4ರಲ್ಲಿರುವ ನಿವಾಸದಲ್ಲಿ ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಯುವರಾಜ್ ಸಿಂಗ್ ಅವರ ಮನೆಯಲ್ಲಿದ್ದ 75 ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದು, ಮನೆಗೆಲಸದವರ ಮೇಲೆ ಆರೋಪ ಕೇಳಿ ಬರುತ್ತಿದೆ.

ಈ ಕುರಿತು ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಮನೆಗೆಲಸದ ಸಿಬ್ಬಂದಿಗಳಾದ ಲಲಿತಾ ದೇವಿ ಮತ್ತು ಬಿಹಾರ ಮೂಲದ ಅಡುಗೆ ಸಿಬಂದಿ ಸಿಲ್ದಾರ್ ಪಾಲ್ ಅವರ ಮೇಲೆ ಅನುಮಾನವಿದೆ ಎಂದು ಹೇಳಿಕೊಂಡಿದ್ದಾರೆ.

ಪೊಲೀಸರಿಂದ ತನಿಖೆ:
ತಾಯಿ ಶಬನಮ್ ಸಿಂಗ್ ಅವರ ಪ್ರಕಾರ, ಅವರು ಸೆಪ್ಟೆಂಬರ್ 2023 ರಿಂದ ಗುರ್ಗಾಂವ್‌ನಲ್ಲಿರುವ ತಮ್ಮ ಎರಡನೇ ನಿವಾಸದಲ್ಲಿ ವಾಸಿಸುತ್ತಿದ್ದರು ಬಳಿಕ ಅಕ್ಟೋಬರ್ 5, 2023 ರಂದು ಅವರು ಪಂಚಕುಲದ ಮನೆಗೆ ಹಿಂದಿರುಗಿದ್ದಾರೆ, ಈ ವೇಳೆ ಮನೆಯಲ್ಲಿದ್ದ ಸುಮಾರು 75,000 ರೂಪಾಯಿ ಮೌಲ್ಯದ ಆಭರಣಗಳು ಮತ್ತು ಇತರ ವಸ್ತುಗಳು ಕಪಾಟಿನಲ್ಲಿ ಕಾಣೆಯಾಗಿವೆ ಎಂದು ಹೇಳಿದ್ದಾರೆ. ಇದೇ ಹೊತ್ತಿಗೆ ಮನೆಕೆಲಸದ ಸಿಬಂದಿಗಳಾದ ಲಲಿತಾ ದೇವಿ ಮತ್ತು ಸಿಲ್ದಾರ್ ಪಾಲ್ ಇದ್ದಕ್ಕಿದ್ದಂತೆ ತಮ್ಮ ಕೆಲಸವನ್ನು ತೊರೆದು ಹೋಗಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಕಳ್ಳತನವಾದ ವಿಚಾರದಲ್ಲಿ ಮನೆಕೆಲಸದ ಸಿಬ್ಬಂದಿಗಳ ಕೈಚಳಕ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದು ಕೂಲಂಕುಷ ವಿಚಾರಣೆ ನಡೆಸಬೇಕೆಂದು ಯುವರಾಜ್ ಸಿಂಗ್ ತಾಯಿ ಪೊಲೀಸರಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೆ ಶಬ್ನಮ್ ಸಿಂಗ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: Daily Horoscope: ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೇ ಯಶಸ್ಸಿನ ಸೂತ್ರ

Advertisement

Udayavani is now on Telegram. Click here to join our channel and stay updated with the latest news.

Next