Advertisement

21 ವರ್ಷದ ಹಿಂದೆ ಕಳ್ಳತನ: ಆರೋಪಿಯನ್ನು ಬಂಧಿಸಲು ಯಶಸ್ವಿಯಾದ ಪೊಲೀಸರು

08:11 PM Sep 17, 2022 | Team Udayavani |

ಅಂಕೋಲಾ: ಕಳೆದ 21 ವರ್ಷದ ಹಿಂದೆ ಕಳ್ಳತನ ಎಸಗಿ ನಾಪತ್ತೆಯಾಗಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಗೋವಾದ ಮೆರ್ಸಿ ಎಂಬಲ್ಲಿ ಬಂಧಿಸಿ ಕರೆತಂದ ಘಟನೆ ಶನಿವಾರ ನಡೆದಿದೆ.

Advertisement

ಮೂಲತ ಹಳಿಯಾಳ ತಾಲೂಕಿನ ಹಾಲಿ ಗೋವಾ ನಿವಾಸಿ ಚಂದ್ರಶೇಖರ ಯಾನೆ ರಾಜು ಬಣಜಿಗಾರ ಬಂಧಿತ ಆರೋಪಿಯಾಗಿದ್ದಾನೆ.

ಘಟನೆ ವಿವರ
ಕಳೆದ 2009ರಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಂಕೋಲಾ ಠಾಣೆಯ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಅಪರಾಧ ವಿಶೇಷ ದಳದ ಸಿಬಂದಿ ಶ್ರೀಕಾಂತ ಕಟಬರ, ಸುರೇಶ ಬಳ್ಳೋಳ್ಳಿ, ಮಾರುತಿ ಹಣಜಿಗರ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next