Advertisement

ಕೆಜಿಎಫ್ ಬ್ಲಾಕ್‌ ಟಿಕೆಟ್‌ ಸಿಗದಿದ್ದಕ್ಕೆ ಆಕ್ರೋಶ ;ಚೆಲ್ಲಿತು ರಕ್ತ!

01:10 PM Dec 20, 2018 | Team Udayavani |

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಭಾರೀ ನಿರೀಕ್ಷೆಯ ಕೆಜಿಎಫ್ ಚಿತ್ರದ ಟಿಕೆಟ್‌ಗಳಿಗಾಗಿ ಜನರು ಮುಗಿ ಬಿದ್ದಿದ್ದು, ಇದೇ ವೇಳೆ ಚಿತ್ರಮಂದಿರದ ಸಿಬಂದಿಯೊಬ್ಬರಿಗೆ ಇರಿದ ಘಟನೆ ನಡೆದಿದೆ. 

Advertisement

ಮಾಗಡಿ ರಸ್ತೆ ಯ ವಿರೇಶ್‌ ಚಿತ್ರಮಂದಿರದ ಬಳಿ ಘಟನೆ ನಡೆದಿದ್ದು, ಬ್ಲಾಕ್‌ನಲ್ಲಿ ಟಿಕೆಟ್‌ ಮಾರುವ ಉದ್ದೇಶ ಹೊಂದಿದ್ದ ದುಷ್ಕರ್ಮಿ ಚಿತ್ರಮಂದಿರದ ಸಿಬಂದಿ ಬಳಿ ಟಿಕೆಟ್‌ ಕೇಳಿದ್ದು ಕೊಡಲು ಸಾಧ್ಯವಿಲ್ಲ ಎಂದಾಗ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. 

ಅರವಿಂದ್‌ ಎಂಬ ಚಿತ್ರಮಂದಿರದ ಸಿಬಂದಿಯ ಎಡ ಕೈಯ ಬೆರಳೊಂದು ತುಂಡಾಗಿದ್ದು, ಬಲ ಕೈಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅರವಿಂದ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಾಗಿ ಶೋಧ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next