Advertisement

“ರಂಗಪ್ರಸಂಗ-5′ಆಮಂತ್ರಣ ಪತ್ರಿಕೆ ಬಿಡುಗಡೆ

03:45 AM Jul 07, 2017 | Harsha Rao |

ಕಾಸರಗೋಡು: ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೊಡು ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ರಂಗ ಪ್ರಸಂಗ ಸರಣಿ ಕಾರ್ಯಕ್ರಮದ ಐದನೇ ಕಾರ್ಯಕ್ರಮ “ರಂಗಪ್ರಸಂಗ-5′ ಅಧ್ಯಯನ ಯೋಗ್ಯ ಯಕ್ಷಗಾನ ಪ್ರದರ್ಶನವು ಬೆಂಗಳೂರಿನಲ್ಲಿ ಶ್ರೀ ರಾಮ ಕಲಾಸಂಘ ಕೋಣನ ಕುಂಟೆ ಹಾಗೂ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾಸಂಘ ನೇರಳಕಟ್ಟೆ’ ಸಂಸ್ಥೆಗಳ ಸಹಕಾರಗೊಂದಿಗೆ ಜುಲೈ 16 ಆದಿತ್ಯವಾರ ಅಪರಾಹ್ನ 2ರಿಂದ ಜೆ.ಪಿ.ನಗರ. ಕೋಣನಕುಂಟೆ ಶ್ರೀ ಲಕ್ಷಿ$¾à ನರಸಿಂಹ ಧಾರ್ಮಿಕ ಸಭಾಂಗಣದಲ್ಲಿ ಜರಗಲಿದೆ.

Advertisement

ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು  ಕಾಸರಗೋಡು ಸರಕಾರೀ ಕಾಲೇಜಿನ ಯಕ್ಷಗಾನ ಅಧ್ಯಯನ ಪೀಠದ ನಿರ್ದೇಶಕರಾದ ಡಾ| ರತ್ನಾಕರ ಮಲ್ಲಮೂಲೆ ಕಾಸರಗೋಡಿನಲ್ಲಿ ಬಿಡುಗಡೆ ಗೊಳಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕಾಸರಗೋಡಿನ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟದ ನಿರ್ದೇಶಕ ರಮೇಶ ಕೆ.ವಿ., ಹಿರಿಯ ಸಾಹಿತಿ, ಕವಿ ರಾಧಾಕೃಷ್ಣ ಉಳಿಯತ್ತಡ್ಕ, ಪ್ರಶಾಂತ ಹೊಳ್ಳ ನೀರಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next