Advertisement

ಶ್ರೀರಾಮುಲುಗೆ ಕನ್ನಡ ಕಲಿಕೆ ಪುಸ್ತಕ ಕಳುಹಿಸಿದ ಮಹಿಳೆ

11:29 PM Jan 27, 2020 | Lakshmi GovindaRaj |

ರಾಯಚೂರು: ನಗರದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೆಲ ಕನ್ನಡ ಪದಗಳನ್ನು ತಪ್ಪಾಗಿ ಉಚ್ಚರಿಸಿದ ಸಚಿವ ಬಿ.ಶ್ರೀರಾಮುಲು ಅವರಿಗೆ ಮಹಿಳೆಯೊಬ್ಬರು “30 ದಿನದಲ್ಲಿ ಕನ್ನಡ ಕಲಿಕಾ ಪುಸ್ತಕ’ ಕಳುಹಿಸಿದ್ದಾರೆ. ಪರ್ವತಾರೋಹಿ ಎಂದು ಗುರುತಿಸಿ ಕೊಂಡಿ ರುವ ಕವಿತಾ ರೆಡ್ಡಿ ಎನ್ನುವವರು 30 ದಿನಗಳಲ್ಲಿ ತೆಲುಗು ಮೂಲಕ ಕನ್ನಡವನ್ನು ಕಲಿಯಿರಿ ಎನ್ನುವ ಪುಸ್ತಕವನ್ನು ಅಮೆಜಾನ್‌ನಲ್ಲಿ ಬುಕ್‌ ಮಾಡಿ ಬಳ್ಳಾರಿಯ ಶ್ರೀರಾಮುಲು ಅವರ ವಿಳಾಸಕ್ಕೆ ಕಳುಹಿಸಿದ್ದಾರೆ.

Advertisement

ಅಮೆಜಾನ್‌ನಲ್ಲಿ ಶ್ರೀರಾಮುಲು ವಿಳಾಸಕ್ಕೆ ಪುಸ್ತಕ ಬುಕ್‌ ಮಾಡಿದ ಪ್ರತಿಯನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, “ಗೌರವಾನ್ವಿತ ರಾಮುಲು ಅಣ್ಣನವರೇ, ದಯವಿಟ್ಟು ಕನ್ನಡ ಕೊಲ್ಲಬೇಡಿ. ಮುಂದಿನ ಆ.15ರೊಳಗೆ ಕನ್ನಡ ಕಲಿಯಿರಿ. ಕುಮಾರಣ್ಣನನ್ನು ಪಾಕಿಸ್ತಾನಕ್ಕೆ ಹೋಗು ಎನ್ನುವ ಮುನ್ನ ನೀವು ಕನ್ನಡ ಕಲಿಯಿರಿ. ದಯವಿಟ್ಟು ನನ್ನ ಈ ಉಡುಗೊರೆ ಸ್ವೀಕರಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next