Advertisement

ಪತಿಯನ್ನು ಕೊಂದು ಕಥೆ ಕಟ್ಟಿದ್ದ ಪತ್ನಿ , ಪ್ರಿಯಕರ ಸೆರೆ

11:09 PM Jan 07, 2023 | Team Udayavani |

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಿದ್ದ ಪತಿಯನ್ನು ಕೊಂದು ಕುಡಿದು ಮೃತಪಟ್ಟಿದ್ದಾನೆ ಎಂದು ಕಥೆ ಕಟ್ಟಿದ್ದಲ್ಲದೆ, ತಂದೆ ಕೊಲೆ ರಹಸ್ಯ ಬಾಯಿಬಿಡದಂತೆ ಮಕ್ಕಳಿಗೆ ಪ್ರಾಣ ಬೆದರಿಕೆ ಹಾಕಿದ್ದ ತಾಯಿ ಮತ್ತು ಆಕೆಯ ಪ್ರಿಯಕರ ನಂದಿನಿ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ನಂದಿನಿ ಲೇಔಟ್‌ನ ಸಂಜಯ ಗಾಂಧಿ ನಗರ ನಿವಾಸಿ ಅನಿತಾ (31) ಮತ್ತು ಉತ್ತರಹಳ್ಳಿಯ ರಾಕೇಶ್‌ (26) ಬಂಧಿತರು. ಆರೋಪಿಗಳು 2022ರ ಜೂನ್‌ 18ರಂದು ಆಂಜನೇಯ (37) ಎಂಬಾತನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಆಂಜನೇಯ ಮತ್ತು ಪತ್ನಿ ಅನಿತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿ ದ್ದಾರೆ. ಆಂಜನೇಯ ಟೈಲ್ಸ್‌ ಕೆಲಸ ಮಾಡು
ತ್ತಿದ್ದು, ಮದ್ಯ ವ್ಯಸನಿಯಾಗಿದ್ದ. ಅನಿತಾ ಗಾರ್ಮೆಂಟ್ಸ್‌ ಉದ್ಯೋಗಿಯಾಗಿ ದ್ದಳು. ರಾಕೇಶ್‌ ಕ್ಯಾಂಟೀನ್‌ ಕಾರ್ಮಿಕನಾಗಿದ್ದ. ಸಹೋದರಿಯ ಮನೆಗೆ ಹೋಗಿದ್ದಾಗ ಅನಿತಾಳಿಗೆ ರಾಕೇಶ್‌ ಪರಿಚಯವಾಗಿದ್ದು, ನಾಲ್ಕೈದು ವರ್ಷಗಳಿಂದ ಅವರ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ತಿಳಿದ ಬಳಿಕ ಆಂಜನೇಯನು ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಜೂನ್‌ 18ರಂದು ಅನಿತಾ ಮತ್ತು ರಾಕೇಶ್‌ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಆಂಜನೇಯನನ್ನು ಕೊಂದಿದ್ದರು. ಮರುದಿನ ಬೆಳಗ್ಗೆ ಸಂಬಂಧಿಕರಿಗೆ ಕರೆ ಮಾಡಿ ಆಂಜನೇಯ ಕುಡಿದು ಮೃತಪಟ್ಟಿ ದ್ದಾನೆ ಎಂದು ವಿಚಾರ ತಿಳಿಸಿದ್ದಳು. ಆತ ಕೂಡ ಅದೇ ರೀತಿ ವರ್ತಿಸುತ್ತಿದ್ದ ಎಂದು ನಂಬಿದ ಸಂಬಂಧಿಕರು ಅಂತ್ಯಕ್ರಿಯೆ ಮುಗಿಸಿದ್ದರು.

ಪ್ರಿಯಕರನೊಂದಿಗೆ ಪರಾರಿ
ಕೊಲೆ ಕೃತ್ಯವನ್ನು ಮಕ್ಕಳು ನೋಡಿದ್ದರು. ಆದರೆ ಯಾರಿಗೂ ಹೇಳದಂತೆ ಅನಿತಾ ಬೆದರಿಸಿದ್ದಳು. ಕೆಲವೊಮ್ಮೆ ಮಕ್ಕಳು ಈ ವಿಚಾರ ಪ್ರಸ್ತಾವಿಸಿದರೆ ಚಾಕು ತೋರಿಸಿ ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕುತ್ತಿದ್ದಳು. ಮೂರು ತಿಂಗಳ ಹಿಂದೆ ತನ್ನ ಮಕ್ಕಳನ್ನು ಬಿಟ್ಟು ಹೆಗ್ಗನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ಮಧ್ಯೆ ಅಜ್ಜಿ ಬಳಿ ತಂದೆಯನ್ನು ತಾಯಿಯೇ ಕೊಲೆಗೈದಿದ್ದಾಳೆ ಎಂದು ಹೇಳಿದ್ದರು.

Advertisement

ಈ ಸಂಬಂಧ ಜ.4 ನಂದಿನಿ ಲೇಔಟ್‌ ಠಾಣೆಯಲ್ಲಿ ತಾಯಿ ವಿರುದ್ಧ ಮಕ್ಕಳು ಕೊಲೆ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next