Advertisement

ಭಾರತ ಭಾಗ್ಯ ವಿಧಾತದಲ್ಲಿ ದೃಶ್ಯ ವೈಭವ

11:27 AM Mar 06, 2017 | Team Udayavani |

ಬೆಂಗಳೂರು: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಜೀವನಗಾಥೆ ಬಿಂಬಿಸುವ ಧ್ವನಿ-ಬೆಳಕು ದೃಶ್ಯ ವೈಭವಗಳ ರೂಪಕ “ಭಾರತ ಭಾಗ್ಯ ವಿಧಾತ’ ಸಮಾರೋಪ ಭಾನುವಾರ ನಡೆಯಿತು.

Advertisement

ವಾರ್ತಾ ಇಲಾಖೆಯಿಂದ ಬಸವೇಶ್ವರ ನಗರದ ಡಾ. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.  ಡಾ. ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಶನಿವಾರ ಮತ್ತು ಭಾನುವಾರ “ಭಾರತ ಭಾಗ್ಯ ವಿಧಾತ’ ಅಮೋಘ ಪ್ರದರ್ಶನ ಏರ್ಪಡಿಸ­ಲಾಗಿತ್ತು.  

ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮ­ಯ್ಯನವರು ಸುಮಾರು 90 ನಿಮಿಷಗಳ ಕಾಲ ಸಾವಿರಾರು ಜನರ ಮಧ್ಯೆ ಕುಳಿತು ಪ್ರದರ್ಶನ ವೀಕ್ಷಿಸಿದರು. ಈ ವೇಳೆ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಮೇಯರ್‌ ಪದ್ಮಾವತಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next