Advertisement

ವಿಲನ್ ರೋಲ್ ಮುಗೀತು, ಈಗ ಹೀರೋ ಸರಕಾರ

09:23 AM Sep 18, 2019 | mahesh |

ಗದಗ: ರಾಜ್ಯದಲ್ಲಿ ವಿಲನ್ ಅಧಿಕಾರವಧಿ, ಪಾರ್ಟ್ ಟೈಮ್ ಸರಕಾರದ ರೋಲ್ ಮುಗಿದು, ಈಗ ಹೀರೋ ಸರಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯದ ಜನತೆಗೂ ಈಗ ನಿಶ್ಚಿಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಸ್ವಾರಸ್ಯಕರವಾಗಿ ಹೇಳಿದರು.

Advertisement

ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೨೦೧೩ರಿಂದ 2018ರ ವರೆಗೆ ವಿಲನ್(ಸಿದ್ದರಾಮಯ್ಯ) ಸರಕಾರ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾದರೂ, ಅವರಿಗೆ ಕಣ್ಣಲ್ಲಿ ಹನಿ ನೀರೂ ಬರಲಿಲ್ಲ. ಸಾಲದು ಎಂಬಂತೆ ಸಮಾಜವನ್ನೂ ಒಡೆದರು. ಅದಕ್ಕೆ ಜನರು ತಿರಸ್ಕರಿಸಿದರು.

ಬಳಿಕ ಪಾರ್ಟ್ ಟೈಮ್ ಸರಕಾರ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಸೈಡ್ ಆಕ್ಟರ್ ಆಗಿದ್ದರು. ಇದೀಗ ಹೀರೋ ಸರಕಾರ ಅಧಿಕಾರಕ್ಕೆ ಬಂದಿದೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದಿನ ಮೂರೂವರೆ ವರ್ಷ ಯಾವುದೇ ಅಡೆತಡೆಯಿಲ್ಲದೇ ರಾಜ್ಯ ಅಭಿವೃದ್ಧಿಯತ್ತ ಮುನ್ನಡೆಯಲಿದೆ. ಸದ್ಯ ಎದುರಾಗಿರುವ ಬರ ಮತ್ತು ನೆರೆಯನ್ನು ಸಮರ್ಥವಾಗಿ ನಿಭಾಯಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next