Advertisement

ಕಲಬೆರಕೆ ಸೇಂದಿ ಸಾಗಾಟ: ಇಬ್ಬರ ಬಂಧನ

01:27 PM May 27, 2022 | Team Udayavani |

ಚಿಂಚೋಳಿ: ತಾಲೂಕಿನ ಛತ್ರಸಾಲ ಗ್ರಾಮದ ಕ್ರಾಸ್‌ ಹತ್ತಿರ ತೆಲಂಗಾಣ ರಾಜ್ಯದ ಕರ್ನಕೋಟ ಗ್ರಾಮದಿಂದ ಸೇಡಂ ತಾಲೂಕಿಗೆ ದ್ವಿಚಕ್ರ ವಾಹನದ ಮೇಲೆ 62ಸಾವಿರ ರೂ. ಮೌಲ್ಯದ 40ಲೀಟರ್‌ ಕಲಬೆರೆಕೆ ಸೇಂದಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಾಲೂಕು ಅಬಕಾರಿ ನಿರೀಕ್ಷಕ ಜಟ್ಟೆಪ್ಪ ಬೇಲೂರು ತಿಳಿಸಿದ್ದಾರೆ.

Advertisement

ಸೇಡಂ ಪಟ್ಟಣದ ಶೇಖರ ಖತಲಪ್ಪ ಕೊಡದೂರ, ನಾಗೇಶ ಮರೆಪ್ಪ ಸೇಡಂ ಬಂಧಿತ ಆರೋಪಿಗಳಾಗಿದ್ದಾರೆ.

ತೆಲಂಗಾಣ ರಾಜ್ಯದ ಕರ್ನಕೋಟ ಗ್ರಾಮದಿಂದ ಅಕ್ರಮವಾಗಿ ಕಲಬೆರೆಕೆ ಸೇಂದಿಯನ್ನು ದ್ವಿಚಕ್ರ ವಾಹನದ ಮೇಲೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಅರಿತು ದಾಳಿ ನಡೆಸಿ, ಸೇಂದಿ ಹಾಗೂ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಜಟ್ಟೆಪ್ಪ ಬೇಲೂರ, ಅಬಕಾರಿ ಪೇದೆಗಳಾದ ಗೌತಮ ಬುದ್ಧ, ಶಿವಶರಣಪ್ಪ, ಸಿದ್ಧಾರೂಢ, ವಾಹನ ಚಾಲಕ ಗುರುನಾಥ ಇದ್ದರು. ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next