Advertisement

ಪ್ರಚಾರಕ್ಕೆ ಕರೆದಿಲ್ಲ ಅಂತ ಟವರ್‌ ಏರಿದ

08:00 AM May 01, 2018 | Team Udayavani |

ಬಂಗಾರಪೇಟೆ: ಪಕ್ಷದ ಅಭ್ಯರ್ಥಿ ಪ್ರಚಾರಕ್ಕೆ ತಮ್ಮನ್ನು ಕರೆದಿಲ್ಲ ಎಂಬ ಕಾರಣಕ್ಕೆ ಬೇಸತ್ತು ಗ್ರಾಪಂ ಸದಸ್ಯರೊಬ್ಬರು ಮೊಬೈಲ್‌ ಟವರ್‌ ಹತ್ತಿ ಆತ್ಮಾಹುತಿಗೆ ಯತ್ನಿಸಿದರು. 

Advertisement

ಈ ವಿದ್ಯಮಾನ ನಡೆದದ್ದು ಕೋಲಾರದ ಬಂಗಾರಪೇಟೆಯ ಬಸ್‌ ನಿಲ್ದಾಣದ ಬಳಿ. ಬಿಜೆಪಿ ಅಭ್ಯರ್ಥಿ ಬಿ.ಪಿ.ವೆಂಕಟಮುನಿಯಪ್ಪ ಪ್ರಚಾರಕ್ಕೂ ಕರೆದಿಲ್ಲ, ಅಷ್ಟೇ ಅಲ್ಲ, ಮಾತನಾಡಿಸಿಯೂ ಇಲ್ಲ ಎಂಬುದು ತಾಲೂಕಿನ ಚಿನ್ನಕೋಟೆ ಗ್ರಾಪಂ ಸದಸ್ಯ ಮಂಜುನಾಥರೆಡ್ಡಿ (ಗೋಲ್ಡ್‌ರೆಡ್ಡಿ) ಅವರ ಆಕ್ಷೇಪವಾಗಿತ್ತು. ಕೊನೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಾಧಾನಪಡಿಸಿ ಕೆಳಗಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next