Advertisement

ಮಂದಿರ ನಿರ್ಮಾಣ ನಿರೀಕ್ಷೆ ಹೊಂದಿರುವೆ

02:32 AM May 27, 2019 | Sriram |

ಧಾರವಾಡ: ಮೋದಿಯವರು ಬಹುಮತದಿಂದ ಮತ್ತೂಮ್ಮೆ ಪ್ರಧಾನಿ ಆಗಿದ್ದು, ಈ ಅವಧಿಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ರಾಜ್ಯಸಭೆಯಲ್ಲಿ ಬಹುಮತ ಇರಲಿಲ್ಲ. ಈಗ ರಾಜ್ಯಸಭೆಯಲ್ಲಿಯೂ ಬಹುಮತ ಬರುವುದರಿಂದ ರಾಮಮಂದಿರ ನಿರ್ಮಾಣಕ್ಕೆ ಯಾವುದೇ ತೊಂದರೆ ಇಲ್ಲ. ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನೇ ಮಾಡಿ ಚುನಾವಣೆಯಲ್ಲಿ ವಿಜಯ ಸಾಧಿಸಿರುವ ಮೋದಿ, ಮತ್ತೂಂದು ಅವಧಿಗೆ ಪ್ರಧಾನಿ ಆಗಿರುವುದಕ್ಕೆ ಅವರಿಗೆ ಅಭಿನಂದನೆ. ಬಹುಮತ ಇರುವ ಕಾರಣ ಈ ಸಲ ಖಂಡಿತ ರಾಮಮಂದಿರ ನಿರ್ಮಾಣ ಆಗಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ಈ ಬಗ್ಗೆ ನ್ಯಾಯಾಲಯದಲ್ಲೂ ಇತ್ಯರ್ಥ ಆಗಬೇಕು. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ರಾಜ್ಯ ಸರ್ಕಾರದ ಗೊಂದಲಗಳ ಬಗ್ಗೆ ನಾನು ಮಾತನಾಡಲಾರೆ. ಅಲ್ಲಿ ಒಳ ರಾಜಕೀಯ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next