Advertisement

ಸಹಾರಾದ ಆ್ಯಂಬಿ ವ್ಯಾಲಿ ಸ್ವಾಧೀನಕ್ಕೆ ಸುಪ್ರೀಂ ಆದೇಶ

03:55 AM Feb 07, 2017 | Team Udayavani |

ಹೊಸದಿಲ್ಲಿ: ಸಾಲ ಮರುಪಾವತಿ ಪ್ರಕರಣ ದಲ್ಲಿ ಸಹಾರಾ ಉದ್ಯಮಿ ಸುಬ್ರತಾ ರಾಯ್‌ಗೆ ಪುನಃ ಹಿನ್ನಡೆಯಾಗಿದ್ದು, ಕಂಪನಿಗೆ ಸೇರಿದ 39 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ.

Advertisement

ಸಹಾರಾ ಸಮೂಹಕ್ಕೆ ಸೇರಿರುವ ಪುಣೆಯ ಲೋನಾವಾಲದ ಬಳಿಯಿರುವ ಆ್ಯಂಬಿ ವ್ಯಾಲಿ ಪ್ರಾಪರ್ಟಿಯನ್ನು ಕೋರ್ಟಿನ ಮೇಲ್ವಿ ಚಾರಣೆಯಲ್ಲಿಟ್ಟಿದ್ದು, ಫೆ.27ರ ಮುಂದಿನ ವಿಚಾರಣೆ ವರೆಗೂ ಅಲ್ಲಿ ಯಾವುದೇ ವ್ಯವಹಾರ ನಡೆಸದಂತೆ ನ್ಯಾ.ದೀಪಕ್‌ ಮಿಶ್ರಾ ನೇತೃತ್ವದ ಸುಪ್ರೀಂ ಪೀಠ ಸಹಾರಾ ಸಂಸ್ಥೆಗೆ ಸೂಚಿಸಿದೆ. ಸಹರಾ ಸಂಸ್ಥೆಯು ಸೆಬಿಗೆ ನೀಡಬೇಕಿದ್ದ 14 ಸಾವಿರ ಕೋಟಿ ರೂ. ಠೇವಣಿ ಹಣದಲ್ಲಿ ಈಗಾಗಲೇ 11 ಸಾವಿರ ಕೋಟಿ ರೂ. ನೀಡಿದ್ದು, ಉಳಿದಂತೆ 3 ಸಾವಿರ ಕೋಟಿ ರೂ. ಪಾವತಿ ಬಗ್ಗೆ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಒಂದು ವೇಳೆ ಸಾಲ ಮರುಪಾವತಿ ಆಗದಿದ್ದರೆ ಗಣ್ಯ ಉದ್ಯಮಿಗಳು ವಾಸವಿರುವ ಆ್ಯಂಬಿ ವ್ಯಾಲಿ ಪ್ರಾಪರ್ಟಿಯನ್ನು ಸಾರ್ವಜನಿಕವಾಗಿ ಹರಾಜಿಗಿಡಲಾಗುವುದು ಎಂದು ಕೋರ್ಟ್‌ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next