Advertisement

‘ದಿ ಸ್ಟೋರಿ ಟೆಲ್ಲರ್‌’ : ಸತ್ಯಜಿತ್‌ ರೇ ಅವರಿಗೆ ಸಲ್ಲಿಸಿದ ಕಾಣಿಕೆ

09:53 AM Nov 23, 2022 | Team Udayavani |

ಪಣಜಿ: ‘ದಿ ಸ್ಟೋರಿ ಟೆಲ್ಲರ್‌ ಮೇರು ಚಿತ್ರ ನಿರ್ದೇಶಕ ಸತ್ಯಜಿತ್‌ ರೇಗೆ ಸಲ್ಲಿಸಿರುವ ಗೌರವವಲ್ಲದೇ ಮತ್ತೇನೂ ಅಲ್ಲ’.

Advertisement

ಇಫಿ ಚಿತ್ರೋತ್ಸವದಲ್ಲಿ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಸೆಣಸುತ್ತಿರುವ ಅನಂತ್‌ ನಾರಾಯಣ್‌ ಮಹಾದೇವನ್‌ ಅವರ ’ದಿ ಸ್ಟೋರಿ ಟೆಲ್ಲರ್‌’ ಚಿತ್ರದ ಪ್ರಧಾನ ಪಾತ್ರ ನಿರ್ವಹಿಸಿರುವ ಅದಿಲ್ ಹುಸೇನ್‌ ಹೇಳಿದ ಮಾತಿದು.

ಕಲಾವಿದನಾಗಿ ನಾನು ಹೇಳುವುದಾದರೆ, ಕಲೆ ಎಲ್ಲದರಿಂದಲೂ ಮುಕ್ತ ಹಾಗು ಸ್ವತಂತ್ರವಾಗಿರಬೇಕು. ಆದರೆ ಇಂದಿನ ಸಂದರ್ಭದಲ್ಲಿ ಎಷ್ಟೊಂದು ವಾಣಿಜ್ಯ ಸಂಗತಿಗಳು ಸಿನಿಮಾ ನಿರ್ಮಾಣದಂಥ ಪ್ರಕ್ರಿಯೆಯಲ್ಲಿ ಒಳಗೊಂಡಿಯೆಂದರೆ, ಯಾವುದೂ ಪುಕ್ಕಟೆಗೆ ಸಿಗದು, ಬಾರದು. ಕಲಾವಿದ ಸಮುದಾಯದ ಬಹಳ ಮುಖ್ಯವಾದ ಜವಾಬ್ದಾರಿಯೆಂದರೆ ನಿಜವಾದ ಕರ್ತೃವಿಗೆ ಗೌರವ ನೀಡುವುದು ಹಾಗೂ ಕೃತಿ ಚೌರ್ಯ ಮಾಡದಿರುವುದು. ಕೃತಿಸೌಮ್ಯ ಎಂಬುದು ಎಷ್ಟು ದೊಡ್ಡ ಸವಾಲಿನ ಸಂಗತಿಯಾಗಿದೆ ಎಂದರೆ, ಇದು ಸಿನಿಮಾದಲ್ಲಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳ ಸಮಸ್ಯೆಯಿದು’ ಎಂದವರು ನಟಿ ತನಿಶ್ತಾ ಚಟರ್ಜಿ.

ಕಾರ್ಮಿಕ ನಿಯಮದ ಪ್ರಕಾರ ಯಾವುದೇ ಪುಕ್ಕಟೆಯಾಗಿ ಪಡೆದರೆ, ಅದರ ಪರಿಣಾಮಗಳನ್ನು ಅನುಭವಿಸಬೇಕೆಂದಿದೆ. ಹಾಗಾಗಿ ಯಾವುದೇ ಉತ್ಪನ್ನ ಅಥವಾ ಸೇವೆ ಪಡೆದರೆ, ಸಂಬಂಧಪಟ್ಟವನಿಗೆ ಅದಕ್ಕೆ ಹಣವನ್ನು ಅಥವಾ ಕೃತಜ್ನತೆಯನ್ನು ಸಲ್ಲಿಸಲೇಬೇಕು. ಅದು ಕಲೆ ಇರಬಹುದು, ಏನೇ ಇರಬಹುದು.

‘ಒಂದು ಪಾತ್ರದೊಳಗೆ ತಲ್ಲೀನವಾಗುವ ಮೂಲಕ ನನ್ನೊಳಗೇ ಆ ಪಾತ್ರ ಬೆಳೆಯುವಂತೆ ಮಾಡಿಕೊಳ್ಳುತ್ತೇನೆ. ಆಗ ಮಾತ್ರ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆ. ಒಂದು ಪಾತ್ರಕ್ಕೆ ಸಲ್ಲಬೇಕಾದ ನ್ಯಾಯ ಒದಗಿಸುವುದೇ ಒಬ್ಬ ಉತ್ತಮ ಕಲಾವಿದನ ಕರ್ತವ್ಯ’ ಎಂದರು ಅದಿಲ್ ಹುಸೇನ್‌.

Advertisement

ಒಂದು ಕಲೆಯ ಮುಖ್ಯ ಉದ್ದೇಶವೇ ನಮ್ಮನ್ನು ನಮ್ಮ ಅಸ್ತಿತ್ವದ ಕುರಿತೇ ಪ್ರಶ್ನೆಗಳನ್ನು ಕೇಳುವಂತೆ ಸಶಕ್ತಗೊಳಿಸುವುದು. ಸಿನಿಮಾ ಎಂದರೆ ಬರೀ ದುಡ್ಡು ಮಾಡುವುದಲ್ಲ; ಜಾಗೃತಿ ಮೂಡಿಸುವುದೂ ಸಹ ಅದರ ಹೊಣೆಗಾರಿಕೆ ಎಂಬುದು ಅದಿಲ್ ಹುಸೇನ್‌ ಅಭಿಪ್ರಾಯ.

ಈ ಚಿತ್ರ ಕೃತಿಚೌರ್ಯದ ಕುರಿತು ಪ್ರಬಲವಾದ ಸಂದೇಶವನ್ನು ನೀಡುತ್ತದೆ. ಮೂರು ವರ್ಷಗಳ ಸುದೀರ್ಘ ಹಾಗೂ ಸವಾಲಿನ ಪಯಣದ ಬಳಿಕವೂ ಸಂತೋಷ ಸಿಕ್ಕಿದೆ ಎಂದವರು ಚಿತ್ರದ ನಿರ್ಮಾಪಕ ಸುಚ್ಚಂದಾ ಚಟರ್ಜಿ.

ಅನಂತ್‌ ನಾರಾಯಣ್‌ ಮಹಾದೇವನ್‌ ಚಿತ್ರ ನಿರ್ದೆಶಿಸಿದ್ದರೆ, ಕಿರೀಟ್‌ ಖುರಾನಾ ಚಿತ್ರಕಥೆ ಬರೆದಿದ್ದಾರೆ. ಅಲ್ಫೋನ್ಸ್ ರಾಯ್‌ ಸಿನೆ ಛಾಯಾಗ್ರಹಣ, ಗೌರವ್‌ ಗೋಪಾಲ್ ಝಾರ ಸಂಕಲನವಿದೆ. ಪಾತ್ರವರ್ಗದಲ್ಲಿ ಪರೇಶ್‌ ರಾವಲ್‌, ಅದಿಲ್‌ ಹುಸೇನ್‌, ರೇವತಿ, ತನಿಶ್ತಾ ಚಟರ್ಜಿ, ಜಯೇಶ್‌ ಮತ್ತಿತರರು ಇದ್ದಾರೆ.

ತರಿಣಿ ರಂಜನ್‌ ಬಂಡೋಪಾಧ್ಯಾಯ ಒಬ್ಬ ಕಥೆ ಹೇಳುವವ. ಒಂದು ಉದ್ಯೋಗಕ್ಕೆ ಅಂಟಿಕೊಳ್ಳದೇ 32 ಉದ್ಯೋಗಗಳನ್ನು ಬದಲಾಯಿಸಿರುವವ. ಈಗ 60 ಆಗಿದೆ. ನಿವೃತ್ತಿ ತೆಗೆದುಕೊಂಡಿದ್ದಾನೆ. ಕೋಲ್ಕತ್ತಾವಾಸಿ. ಆದರೆ ಅವನನ್ನು ಬಲವಾಗಿ ಕಾಡುತ್ತಿರುವ ಒಂದೇ ಒಂದು ಸಂಗತಿಯೆಂದರೆ ’ತನ್ನ ಪತ್ನಿಗೆ ಸಾಕಷ್ಟು ಸಮಯ ನೀಡದಿರುವುದು. ಈಗ ಅವನು ಎಲ್ಲದರಿಂದ ಮುಕ್ತಿ, ಸ್ವತಂತ್ರ, ಸಾಕಷ್ಟು ಸಮಯವಿದೆ. ಆದರೆ ಉಳಿದವರಾರೂ ಅವನ ಬಳಿಇಲ್ಲ ಎಂಬುದೇ ವಿರೋಧಾಭಾಸ.

Advertisement

Udayavani is now on Telegram. Click here to join our channel and stay updated with the latest news.

Next