Advertisement
ಒಂದು ಸಲ ಕರೀಮ ಸಾರ್ವಜನಿಕ ಸ್ನಾನಗೃಹಕ್ಕೆ ಹೋಗಿದ್ದ. ಉಚಿತವಾಗಿ ಅಲ್ಲಿ ಸಿಗುವ ನೀರಿನಿಂದ ಸ್ನಾನ ಮಾಡಿದರೆ ಮನೆಯ ನೀರನ್ನು ಉಳಿಸಬಹುದೆಂಬ ಲೆಕ್ಕಾಚಾರ ಅವನದು. ಹೊರಗೆ ತನ್ನ ಹಳೆಯ ಚಪ್ಪಲಿಗಳನ್ನು ಕಳಚಿಟ್ಟು ಒಳಗೆ ಹೋದ. ಸ್ನಾನ ಮುಗಿಸಿ ಬಂದಾಗ ಅವನ ಚಪ್ಪಲಿಗಳ ಸ್ಥಾನದಲ್ಲಿ ಎರಡು ಹೊಚ್ಚ ಹೊಸ ಚಪ್ಪಲಿಗಳಿದ್ದವು. ಬಂಗಾರದ ನೂಲಿನಿಂದ ಹೊಲಿದಿದ್ದ ಚಪ್ಪಲಿಯ ಮೇಲೆ ರತ್ನಗಳನ್ನು ಕೂಡಿಸಲಾಗಿತ್ತು. ದೇವರು ತನ್ನ ಹಳೆಯ ಚಪ್ಪಲಿಗಳನ್ನು ನೋಡಿ ಕನಿಕರದಿಂದ ಹೊಸ ಚಪ್ಪಲಿಗಳನ್ನಾಗಿ ಬದಲಾಯಿಸಿರಬಹುದೆಂದು ಭಾವಿಸಿ ಅದನ್ನು ಮೆಟ್ಟಿಕೊಂಡು ಹೋದ.
Related Articles
Advertisement
ಕರೀಮನಿಗೆ ಈ ಸಲ ಚಪ್ಪಲಿಗಳ ಮೇಲೆ ಇನ್ನಷ್ಟು ದ್ವೇಷವುಕ್ಕಿತು. “”ನನ್ನ ಸಂಪತ್ತನ್ನು ಕರಗಿಸಲು ಕಾದು ಕುಳಿತ ಪಿಶಾಚಿಗಳೇ, ತೊಲಗಿ ಇಲ್ಲಿಂದ” ಎಂದು ಶಪಿಸುತ್ತ ಅವುಗಳನ್ನು ಮನೆಯ ಮುಂದೆ ಹರಿಯುತ್ತಿದ್ದ ಕೊಳಚೆ ನೀರಿನ ಕಾಲುವೆಗೆ ಎಸೆದ. ಪೀಡೆ ತೊಲಗಿತೆಂದು ನೆಮ್ಮದಿಯಿಂದ ಇದ್ದ. ಆದರೆ ಚಪ್ಪಲಿಗಳು ಕಾಲುವೆಯಿಂದ ನೀರು ಹೊರಗೆ ಹೋಗುವ ಕೊಳವೆಯ ದ್ವಾರವನ್ನೇ ಮುಚ್ಚಿದವು. ಕೊಳಚೆ ನೀರು ಉಕ್ಕಿ ಹರಿದು ಇಡೀ ನಗರವನ್ನು ಮುಳುಗಿಸಿತು. ಕೆಟ್ಟ ವಾಸನೆಯಿಂದಾಗಿ ಮೂಗು ಬಿಡಲು ಕಷ್ಟವಾಯಿತು. ಅಧಿಕಾರಿಗಳು ಯಾಕೆ ಹೀಗಾಯಿತೆಂದು ನೋಡಿದಾಗ ಕರೀಮನ ಚಪ್ಪಲಿಗಳಿಂದಾಗಿ ಅನಾಹುತ ಸಂಭವಿಸಿರುವುದು ಗೊತ್ತಾಯಿತು. ಅವನ ಎಲ್ಲ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಂಡು ಚಪ್ಪಲಿಗಳನ್ನು ಕೈಗೆ ಕೊಟ್ಟು ಕಳುಹಿಸಿದರು.
ಇನ್ನಾದರೂ ದರಿದ್ರ ಚಪ್ಪಲಿಗಳಿಂದ ಮುಕ್ತಿ ಹೊಂದಬೇಕು. ಅವುಗಳನ್ನು ಹೂಳಬೇಕೆಂದು ಕರೀಮ ನಿರ್ಧರಿಸಿದ. ಶ್ಮಶಾನದ ಬಳಿ ರಾತ್ರೆ ಹೊಂಡ ತೋಡತೊಡಗಿದ. ಇದನ್ನು ಕಂಡವರು ರಾಜನ ಬಳಿಗೆ ಹೋಗಿ, ಕರೀಮ ಭೂಮಿಯನ್ನು ಅಗೆದು ನಿಧಿಯನ್ನು ತೆಗೆಯುತ್ತಿರುವುದಾಗಿ ಹೇಳಿದರು. ರಾಜನು ತಕ್ಷಣ ಭಟರನ್ನು ಕಳುಹಿಸಿದ. ಭಟರು ಶ್ಮಶಾನದ ಬಳಿ ಹೊಸದಾಗಿ ಕಾಣಿಸಿದ ಗುಂಡಿಯನ್ನು ಮುಚ್ಚಿದ್ದ ಮಣ್ಣನ್ನು ಹೊರಗೆ ಸರಿಸಿ ನೋಡಿದಾಗ ಒಳಗೆ ಹಳೆಯ ಚಪ್ಪಲಿಗಳು ಕಾಣಿಸಿದವು. ಅದರೊಂದಿಗೇ ಕರೀಮನನ್ನು ಆಸ್ಥಾನಕ್ಕೆ ಎಳೆದು ತಂದರು. ರಾಜನು, “”ಭೂಮಿಯೊಳಗೆ ಚಪ್ಪಲಿಗಳನ್ನಿರಿಸಿ ಮಣ್ಣು ಮುಚ್ಚಿದರೆ ನಮಗೆ ತಿಳಿಯುವುದಿಲ್ಲವೆಂದುಕೊಂಡೆಯಾ? ಎಲ್ಲಿದೆ ಆ ನಿಧಿ ಸತ್ಯ ಹೇಳು. ತಪ್ಪಿದರೆ ಸಾಯುವ ವರೆಗೂ ಸೆರೆಯಲ್ಲಿ ಕೊಳೆಯಬೇಕಾಗುತ್ತದೆ” ಎಂದು ಹೇಳಿದ.
ಕರೀಮ ಬಿಕ್ಕಿ ಬಿಕ್ಕಿ ಅತ್ತ. “”ದೊರೆಯೇ, ನನಗೆ ಸಾಯುವ ವರೆಗೂ ಸೆರೆವಾಸವೇ ಆಗಬಹುದು. ಆದರೆ ನನ್ನ ಚಪ್ಪಲಿಗಳೊಂದಿಗೆ ಮರಳಿ ಮನೆಗೆ ಹೋಗುವಂತೆ ಮಾಡಬೇಡಿ. ಅವುಗಳಿಂದಾಗಿ ನಾನು ಸರ್ವಸ್ವವನ್ನೂ ಕಳೆದುಕೊಂಡಿರುವ ಕಾರಣ ನನ್ನ ಬಳಿ ದಂಡವಾಗಿ ಕೊಡಲು ಏನೂ ಉಳಿದಿಲ್ಲ” ಎಂದು ನಿವೇದಿಸಿದ. ರಾಜನಿಗೆ ಕುತೂಹಲವಾಯಿತು. “”ಚಪ್ಪಲಿಗಳಿಂದಾಗಿ ಯಾಕೆ ನಿನಗೆ ನಷ್ಟವಾಯಿತು?” ಎಂದು ಕೇಳಿದ.
“”ಲೋಭತನದಿಂದಾಗಿ ಹಳೆಯ ಚಪ್ಪಲಿಗಳನ್ನೇ ತೇಪೆ ಹಚ್ಚಿ ಹಾಕಿಕೊಳ್ಳುತ್ತಿದ್ದೆ. ಅದರಿಂದಾಗಿ ನಾನು ಎಲ್ಲ ಆಸ್ತಿಯನ್ನೂ ಕಳೆದುಕೊಂಡೆ. ಇನ್ನೂ ಅವು ನನ್ನ ಜೊತೆಗಿದ್ದರೆ ನನ್ನ ಜೀವವೂ ಉಳಿಯುವುದಿಲ್ಲ” ಎಂದು ಕರೀಮ ನಡೆದ ವಿಷಯಗಳನ್ನು ವಿವರಿಸಿದ. ರಾಜನಿಗೆ ಅವನ ಮೇಲೆ ಕನಿಕರವುಂಟಾಯಿತು. “”ಲೋಭತನ ಬಿಟ್ಟು ಒಳ್ಳೆಯವನಾಗಿ ಬದುಕಿಕೋ. ನಾನು ನಿನಗೆ ವ್ಯಾಪಾರ ಮಾಡಲು ಸ್ವಲ್ಪ ಹಣವನ್ನು ಕೊಡುತ್ತೇನೆ” ಎಂದು ಹೇಳಿದ. ಕರೀಮ ಒಳ್ಳೆಯ ಮನುಷ್ಯನಾಗಿ ಬದುಕಿದ.
ಪ. ರಾಮಕೃಷ್ಣ ಶಾಸ್ತ್ರಿ