Advertisement

ಏಡಿಯ ಕತೆ

06:00 AM Dec 20, 2018 | Team Udayavani |

ಒಂದು ಕೊಕ್ಕರೆ ತನ್ನ ಹೆಂಡತಿಯೊಡನೆ ಮರದ ಮೇಲೆ ವಾಸವಾಗಿತ್ತು. ಅದೇ ಮರದ ಪೊಟರೆಯಲ್ಲಿ ಹಾವು ಕೂಡಾ ವಾಸವಾಗಿತ್ತು. ಕೊಕ್ಕರೆ ದಂಪತಿಗಳಗೆ ಮರಿಗಳು ಹುಟ್ಟಿದಾಗಲೆಲ್ಲ ಹಾವು ಅವನ್ನು ತಿಂದು ಹಾಕಿ ಬಿಡುತ್ತಿತ್ತು. ಏಡಿಗಳನ್ನೂ, ಮೀನುಗಳನ್ನೂ ಹಿಡಿದು ತಿಂದು ಸಂತೋಷಪಡುತ್ತಿದ್ದ ಕೊಕ್ಕರೆಗಳಿಗೆ ತಮ್ಮ ಮರಿಗಳನ್ನು ಹಾವು ತಿನ್ನುತ್ತಿದ್ದುದು ತುಂಬಾ ದುಃಖದ ಸಂಗತಿಯಾಗಿತ್ತು. ಕೊಳದ ಬಳಿ ಕೊಕ್ಕರೆಯೊಂದು ದುಃಖದಿಂದ ಕೂತಿದ್ದಾಗ ಅದನ್ನು ಏಡಿಯೊಂದು ನೋಡಿತು. 

Advertisement

“ಕೊಕ್ಕರೆ, ನೀನು ದುಃಖಪಡುತ್ತಿದ್ದೀಯಲ್ಲಾ, ಯಾಕೆ?’ ಎಂದು ಏಡಿ ಕೇಳಿತು. ಹಾವು ತನ್ನ ಮರಿಗಳನ್ನು ತಿನ್ನುವ ವಿಷಯವನ್ನು ಕೊಕ್ಕರೆ ಹೇಳಿತು. “ಈ ಕೊಕ್ಕರೆ ನನ್ನ ಕುಲದ ಶತ್ರು. ಆದ್ದರಿಂದ ಇದರ ವೇದನೆಯನ್ನು ನಾನು ಏಕೆ ಹೆಚ್ಚಿಸಬಾರದು’ ಎಂದು ಏಡಿ ಮನಸ್ಸಿನಲ್ಲೇ ಅಂದುಕೊಂಡಿತು. ಏಡಿ ಕೊಕ್ಕರೆಯ ಕತೆ ಕೇಳಿ ಅನುಕಂಪ ತೋರಿಸುವಂತೆ ನಟಿಸಿ: “ಹಾವನ್ನು ಹೇಗೆ ನಿರ್ನಾಮ ಮಾಡಬೇಕಂದು ನಾನು ಹೇಳುತ್ತೇನೆ. ಮುಂಗುಸಿ ವಾಸವಾಗಿರುವ ಜಾಗ ನಿನಗೆ ಗೊತ್ತಲ್ಲ. ಅಲ್ಲಿಂದ ಹಾವಿನ ಪೊಟರೆಯವರೆಗೆ ಸುತ್ತ ಮೀನುಗಳನ್ನು ಸಾಲಾಗಿ ಹಾಕುತ್ತಾ ಹೋಗು. ಒಂದೊಂದಾಗಿ ಮೀನು ತಿನ್ನುತ್ತ ಮುಂಗುಸಿ ಮುಂದೆ ಮುಂದೆ ಹೋಗುತ್ತದೆ. ಹಾವಿನ ಪೊಟರೆ ಸಿಕ್ಕಾಗ ಮುಂಗುಸಿ ಹಾವನ್ನು ಕೊಲ್ಲುತ್ತದೆ.

ಏಡಿ ಹೇಳಿದಂತೆಯೇ ಮಾಡಿತು ಕೊಕ್ಕರೆ. ಮುಂಗುಸಿ ಹಾವನ್ನು ಕೊಂದಿತು. ಆದರೆ ಅಜಿ ತಾನೆ ಹುಟ್ಟಿದ ಕೊಕ್ಕರೆಯ ಮರಿಯನ್ನೂ ಮುಂಗುಸಿ ತಿಂದು ಹಾಕಿತು. 

ಕೃಪೆ: ಓರಿಯೆಂಟಲ್‌ ಲಾಂಗ್‌ಮನ್‌

Advertisement

Udayavani is now on Telegram. Click here to join our channel and stay updated with the latest news.

Next