Advertisement

ಕನಕ-ರಾಯಣ್ಣನ ಪ್ರತಿಮೆ ಮೆರವಣಿಗೆ

02:27 PM Dec 15, 2021 | Team Udayavani |

ನಾರಾಯಣಪುರ: ಜೋಗುಂಡಭಾವಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲೆಂದು ದಾಸ ಶ್ರೇಷ್ಠರು ಸಂತ ಕನಕದಾಸರು, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಗಳನ್ನು ಮಂಗಳವಾರ ಮೆರವಣಿಗೆ ಮಾಡುವ ಮೂಲಕ ಮುದ್ದೇಬಿಹಾಳದಿಂದ ಜೋಗುಂಡಭಾವಿ ಗ್ರಾಮಕ್ಕೆ ಕರೆತರಲಾಯಿತು.

Advertisement

ಮೆರವಣಿಗೆಯಲ್ಲಿ ಡೊಳ್ಳು ಮೇಳದ ಜೊತೆಗೆ ಡಿ.ಜೆ ಹಾಡಿಗೆ ಯುವಕರು ಕೋಲಾಟದ ಕುಣಿತದೊಂದಿಗೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಇದೇ ವೇಳೆ ಯುವಕರು ಬೈಕ್‌ಗಳಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರವಿರುವ ಬಾವುಟ ಕಟ್ಟಿ, ಜಯಘೋಷ ಕೂಗಿದರು. ಈ ವೇಳೆ ಜೋಗುಂಡಭಾವಿ ಗ್ರಾಮದ ಪ್ರಮುಖರು, ಸಮುದಾಯದ ಯುವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next