Advertisement

ದೇಶದ 10 ಶ್ರೇಷ್ಠ ವಕೀಲರಲ್ಲಿ ರಾಜ್ಯದ ಡಾ|ಬಿ.ವಿ.ಆಚಾರ್ಯ

06:00 AM Dec 05, 2017 | Team Udayavani |

ಬೆಂಗಳೂರು: ಭಾರತೀಯ ವಕೀಲರ ಪರಿಷತ್ತ್ನ ವತಿಯಿಂದ ಗುರುತಿಸಲಾಗುವ ದೇಶದ ಹತ್ತು ಶ್ರೇಷ್ಠ ವಕೀಲರ ಪಟ್ಟಿಯಲ್ಲಿ ಕರ್ನಾಟಕದ ಹಿರಿಯ ವಕೀಲ, ಮಾಜಿ ಅಡ್ವೋಕೇಟ್‌ ಜನರಲ್‌ ಡಾ| ಬಿ.ವಿ.ಆಚಾರ್ಯ ಅವರು ಸ್ಥಾನ ಪಡೆದಿದ್ದಾರೆ.

Advertisement

ಭಾರತೀಯ ವಕೀಲರ ಪರಿಷತ್‌ ಉದ್ಘಾಟನೆಯಾದ ದಿನದಂದು (ಡಿ.3) ದೇಶದ 10 ಶ್ರೇಷ್ಠ ವಕೀಲರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಪರಿಷತ್‌ ಕಳೆದ ವರ್ಷದಿಂದ ಆರಂಭಿಸಿದ್ದು, ಈ ವರ್ಷದ 10 ಶ್ರೇಷ್ಠರ ಪೈಕಿ ಉಡುಪಿ ಮೂಲದ ಬಿ. ವಿ. ಆಚಾರ್ಯ ಅವರೂ ಇದ್ದಾರೆ. ವಿಶೇಷವೆಂದರೆ ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ವಕೀಲರು ಇವರಾಗಿದ್ದಾರೆ.

ರವಿವಾರ ದಿಲ್ಲಿಯಲ್ಲಿ ನಡೆದ ವಕೀಲರ ಪರಿಷತ್‌ನ ವಾರ್ಷಿಕೋತ್ಸವದಲ್ಲಿ ದಿಲ್ಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾ| ಎ.ಪಿ.ಶಾ, ಹಿರಿಯ ವಕೀಲ ಫಾಲಿ ಎಸ್‌. ನಾರಿಮನ್‌ ಮತ್ತು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಡಾ| ಆಚಾರ್ಯ ಅವರನ್ನು ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next