Advertisement

ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಗಡ್ಕರಿ

12:48 AM Sep 12, 2019 | Team Udayavani |

ನವದೆಹಲಿ: ಆಟೋಮೊಬೈಲ್ ಕ್ಷೇತ್ರದ ಆರ್ಥಿಕ ಬಿಕ್ಕಟ್ಟಿಗೆ ಯುವಕರು ಓಲಾ, ಊಬರ್‌ ಕಾರುಗಳನ್ನೇ ಹೆಚ್ಚಾಗಿ ಬಳಸುತ್ತಿರುವುದು ಕಾರಣ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಬಿಕ್ಕಟ್ಟಿಗೆ ಅನೇಕ ಕಾರಣಗಳಿವೆ. ಅನೇಕರು ಇ-ರಿಕ್ಷಾಗಳತ್ತ ಮುಖ ಮಾಡಿರುವ ಕಾರಣ ಐಸಿಇ ಆಟೋ ರಿಕ್ಷಾಗಳ ಮಾರಾಟ ಕುಗ್ಗಿದೆ, ದೇಶಾದ್ಯಂತ ಸಾರ್ವಜನಿಕ ಸಾರಿಗೆಯ ಸುಧಾರಣೆಯೂ ಕಾರುಗಳ ಮಾರಾಟ ತಗ್ಗಲು ಕಾರಣ. ಈ ರೀತಿಯ ಅನೇಕ ಕಾರಣಗಳಲ್ಲಿ ಓಲಾ, ಊಬರ್‌ ಕೂಡ ಒಂದು. ಆದರೆ, ನಿರ್ಮಲಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ ಗಡ್ಕರಿ.

ಕಾಂಗ್ರೆಸ್‌ ಕಿಡಿ: ಇದೇ ವೇಳೆ, ನಿರ್ಮಲಾ ಹೇಳಿಕೆಗೆ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ಪ್ರತಿಕ್ರಿಯಿಸಿದ್ದು, ‘ದೇಶದ ಆರ್ಥಿಕತೆಯನ್ನು ನಿಭಾಯಿಸಲಾಗದ ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ನೀವು ಹೊಣೆಗಾರರನ್ನಾಗಿಸುತ್ತೀರಿ’ ಎಂದು ಕಿಡಿಕಾರಿದ್ದಾರೆ. ಜತೆಗೆ, ಟ್ರಕ್‌, ಬಸ್‌ ಮಾರಾಟ ಇಳಿಕೆಯಾಗಲು ಕೂಡ ಯುವಕರು ಓಲಾ, ಊಬರ್‌ ಬಳಕೆ ಮಾಡುತ್ತಿರುವುದು ಕಾರಣವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next