ಬೆಂಗಳೂರು: ರಾಜ್ಯ ಸರಕಾರ ಎಂಟು ಮಂದಿ ಐಎಎಸ್ ಹಾಗೂ 11 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.
ಹುದ್ದೆಯ ನಿರೀಕ್ಷೆಯಲ್ಲಿದ್ದ ಚಾರುಲತಾ ಸೋಮಲ್ ಅವರನ್ನು ದಿಲ್ಲಿಯ ಕರ್ನಾಟಕ ಭವನದ ಹೆಚ್ಚುವರಿ ಸ್ಥಾನಿಕ ಆಯುಕ್ತರನ್ನಾಗಿ ನಿಯೋಜಿಸಿದೆ ಮತ್ತು ರಾಜೀವ ಗಾಂಧಿ ಆರೋಗ್ಯ ವಿವಿ ರಿಜಿಸ್ಟ್ರಾರ್ ಆಗಿದ್ದ ಎಂ.ಆರ್. ರವಿಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಾನಕ್ಕೆ ವರ್ಗಾವಣೆಗೊಳಿಸಿದೆ.
ಜತೆಗೆ ಎಸ್.ಬಿ. ಶೆಟ್ಟಣ್ಣವರ್-ವ್ಯವಸ್ಥಾಪಕ ನಿರ್ದೇಶಕರು, ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತ, ಜೆ. ಮಂಜುನಾಥ್-ವಿಶೇಷ ಅಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ, ಆರೋಗ್ಯ ಇಲಾಖೆ, ಅನ್ನಿಸ್ ಕಣ್ಮಣಿ ಜಾಯ್-ಹೆಚ್ಚುವರಿ ಆಯುಕ್ತೆ, ವಾಣಿಜ್ಯ ತೆರಿಗೆ, ಎಚ್.ಬಸವರಾಜೇಂದ್ರ-ಜಂಟಿ ಕಾರ್ಯದರ್ಶಿ, ಕೌಶಲಾಭಿವೃದ್ಧಿ ಇಲಾಖೆ, ಕವಿತಾ ಎಸ್. ಮಣ್ಣಿಕೇರಿ-ಆಯುಕ್ತೆ, ಕರ್ನಾಟಕ ಗೃಹ ಮಂಡಳಿ, ಬಿ.ವಿ. ವಾಸಂತಿ ಅಮರ್-ವಿಶೇಷ ಜಿಲ್ಲಾಧಿಕಾರಿ-3, ಬೆಂಗಳೂರು ನಗರ ಜಿಲ್ಲೆ (ಉತ್ತರ) ಗೆ ವರ್ಗಾವಣೆಗೊಳಿಸಲಾಗಿದೆ.
ಐಪಿಎಸ್ ಅಧಿಕಾರಿಗಳು
ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ(ಐಎಸ್ಡಿ), ಸೀಮಂತ್ ಕುಮಾರ್ ಸಿಂಗ್ (ಕೆಎಸ್ಆರ್ಪಿ), ಐಜಿಪಿ ಎಸ್.ರವಿ (ಗೃಹ ಇಲಾಖೆಯ ಕಾರ್ಯದರ್ಶಿ), ಎಸ್ಪಿ ಅಜಯ್ ಹಿಲೋರಿ (ಡಿಸಿಆರ್ಇ), ಜಿ.ಎಚ್. ಯತೀಶ್ ಚಂದ್ರ (ಸಿಸಿಬಿ ಡಿಸಿಪಿ-2), ವೈ. ಅಮರನಾಥ್ ರೆಡ್ಡಿ (ಗುಪ್ತಚರ ವಿಭಾಗ, ಕಲಬುರಗಿ), ಬಿ.ಎಲ್.ಶ್ರೀಹರಿ ಬಾಬು ಮತ್ತು ವಿ.ಜೆ.ಸಜೀತ್ ಹಾಗೂ ರಾಮ್ ಎಲ್ ಅರಸಿದ್ದಿ ( ಕರ್ನಾಟಕ ಲೋಕಾಯುಕ್ತ), ಡಾ| ವಿ.ಜೆ. ಶೋಭಾರಾಣಿ(ಬಿಎಂಟಿಎಫ್), ಬಾಬಾಸಾಬ್ ನೆಮಗೊಂಡ (ಗುಪ್ತಚರ ವಿಭಾಗ, ಬೆಳಗಾವಿ) ಇಲ್ಲಿಗೆ ವರ್ಗಾಯಿಸಲಾಗಿದೆ.