Advertisement

ಗುಡಿಸಲ ಮೇಲೆ ಕಾರು ಹರಿಸಿದ ಮಾಜಿ ಎಸ್ಪಿ ಶಾಸಕನ ಮಗ

03:45 AM Jan 09, 2017 | Team Udayavani |

ಲಕ್ನೋ: ಕನ್ನಡದ “ಆ್ಯಕ್ಸಿಡೆಂಟ್‌’ ಸಿನಿಮಾ ಮಾದರಿಯ ಘಟನೆ ಉತ್ತರಪ್ರದೇಶದಲ್ಲಿ ರವಿವಾರ ನಡೆದಿದೆ. ರಸ್ತೆ ಬದಿ ಗುಡಿಸಲಿ ನಲ್ಲಿ ಮಲಗಿದ್ದ 35 ಮಂದಿ ದಿನಗೂಲಿ ಕಾರ್ಮಿಕರ ಮೇಲೆ ಸಮಾಜವಾದಿ ಪಾರ್ಟಿ ಮಾಜಿ ಶಾಸಕನ ಪುತ್ರನ ಕಾರು ಹರಿದ ಪರಿಣಾಮ ಐವರು ಕಾರ್ಮಿಕರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.

Advertisement

ಉತ್ತರ ಪ್ರದೇಶದ ಹಜ್ರತ್‌ಗಂಜ್‌ ಪ್ರದೇಶದ ದಲಿಬಾಗ್‌ ಎಂಬಲ್ಲಿ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಆರೋ ಪಿಗಳನ್ನು ಬಂಧಿಸಲಾಗಿದೆ. ಎಸ್ಪಿ ಶಾಸಕ ರೊಬ್ಬರ ಪುತ್ರ ಅಯುಷ್‌ ಕುಮಾರ್‌ ರಾವತ್‌ ಮತ್ತು ನಿಖೀಲ್‌ ಅರೋರ ಬಂಧಿತ ಆರೋಪಿಗಳು. ಬಂಧಿತರಿಬ್ಬರು ಪಾನಮತ್ತರಾಗಿ, ವೇಗದ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಸಲ್ಮಾನ್‌ ಖಾನ್‌ ಮೇಲೆ ಕೂಡ ಇಂಥದ್ದೇ ಆರೋಪ ಕೇಳಿಬಂದಿದ್ದರೂ ಅವರು ಪ್ರಕರಣದಲ್ಲಿ ಖುಲಾಸೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next