Advertisement

ಹೊಸ ಸಂವತ್ಸರಕ್ಕೆ ಪ್ರಗತಿಯ ಸ್ವಾಗತ; ಷೇರುಪೇಟೆ ಮುಹೂರತ್‌ ವಹಿವಾಟು

01:03 AM Oct 25, 2022 | Team Udayavani |

ಮುಂಬಯಿ: 2079ನೇ ಸಂವತ್ಸರವನ್ನು ಸ್ವಾಗತಿಸುವ ನಿಟ್ಟಿನಲ್ಲಿ ನರಕ ಚತುರ್ದಶಿಯ ದಿನವಾದ ಸೋಮ ವಾರ ಮುಂಬಯಿ ಷೇರು ಪೇಟೆಯಲ್ಲಿ ನಡೆದ ಮುಹೂರತ್‌ ವಹಿವಾಟು ಹೂಡಿಕೆದಾರರಿಗೆ ಸಿಹಿ ನೀಡಿದೆ.

Advertisement

ಸೋಮವಾರ ಸಂಜೆ 6.15 ರಿಂದ 7.15ರವರೆಗೆ ಒಂದು ಗಂಟೆ ಕಾಲ ನಡೆದ ವಿಶೇಷ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 524.51 ಅಂಕಗಳ ಏರಿಕೆ ಕಂಡು, 59,831.66ರಲ್ಲಿ ಕೊನೆಗೊಂಡಿತು. ನಿಫ್ಟಿ ಕೂಡ 154.45 ಅಂಕಗಳ ಏರಿಕೆ ದಾಖಲಿಸಿ, 17,730.75ರಲ್ಲಿ ವಹಿವಾಟು ಅಂತ್ಯಗೊಳಿಸಿತು.

ಮುಹೂರತ್‌ ಟ್ರೇಡಿಂಗ್‌ನಲ್ಲಿ “ಸಕಾರಾ ತ್ಮಕ’ ಫ‌ಲಿತಾಂಶ ವ್ಯಕ್ತವಾಗಿರುವುದು ಷೇರು ಹೂಡಿಕೆದಾರರ ಮೊಗದಲ್ಲಿ ಸಂತಸ ಮೂಡ ಲು ಕಾರಣವಾಯಿತು. ನೆಸ್ಲೆ ಇಂಡಿಯಾ, ಐಸಿಐಸಿಐ ಬ್ಯಾಂಕ್‌, ಎಲ್‌ ಆ್ಯಂಡ್‌ ಟಿ, ಎಚ್‌ಡಿಎಫ್ಸಿ, ಎಸ್‌ ಬಿಐ, ಎಚ್‌ಡಿಎಫ್ಸಿ ಬ್ಯಾಂಕ್‌ ಮತ್ತು ಡಾ. ರೆಡ್ಡೀಸ್‌ ಷೇರುಗಳು ಸುಮಾರು ಶೇ.2.92ರಷ್ಟು ಏರಿಕೆ ಕಂಡವು.

ಕೇವಲ ಹಿಂದುಸ್ಥಾನ್‌ ಯೂನಿಲಿವರ್‌ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಮಾತ್ರ ಶೇ.3.05ರಷ್ಟು ಕುಸಿತ ದಾಖಲಿಸಿದವು. ಹಿಂದೂ ಕ್ಯಾಲೆಂಡರ್‌ ವರ್ಷ “ವಿಕ್ರಮ ಸಂವತ್ಸರ’ದ ಆರಂಭದ ಹಿನ್ನೆಲೆಯಲ್ಲಿ ಪ್ರತಿ ವರ್ಷ ದೀಪಾವಳಿಯಂದು ಒಂದು ಗಂಟೆ ಮುಹೂರತ್‌ ವಹಿವಾಟು ನಡೆಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next