Advertisement

ಗಜಪಡೆ, ಅಶ್ವಪಡೆಗೆ 2ನೇ ಹಂತದ ಸಿಡಿಮದ್ದು ತಾಲೀಮು

09:55 AM Sep 19, 2022 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯನ್ನು ಯಶಸ್ವಿಗೊಳಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆ ಮತ್ತು ಅಶ್ವಪಡೆಗೆ 2ನೇ ಹಂತದ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ನಡೆಯಿತು.

Advertisement

ನಗರದ ವಸ್ತುಪ್ರದರ್ಶನ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಅಂಬಾರಿ ಆನೆ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ ಗಜಪಡೆಗೆ ಹಾಗೂ 41 ಕುದುರೆಗಳ ಬಲವಿರುವ ಅಶ್ವಪಡೆಗೆ ಸಿಡಿಮದ್ದು ತಾಲೀಮು ನಡೆಸಲಾಯಿತು. ಈ ವೇಳೆ ಎಂದಿನಂತೆ ಧನಂಜಯ, ಹೊಸ ಆನೆ ಪಾರ್ಥಸಾರಥಿ ಕೊಂಚ ಬೆದರಿದರೆ, ಭೀಮ 7 ಫಿರಂಗಿಗಳಿಂದ ಮೂರು ಸುತ್ತು 21 ಸಿಡಿಮದ್ದಿನಿಂದ ಹೊರಹೊಮ್ಮಿದ 105.3 ಡೆಸಿಬಲ್‌ನಷ್ಟು ಶಬ್ದಕ್ಕೆ ಒಂದಿಷ್ಟೂ ಬೆದರದೆ ನಿರ್ಭೀತಿಯಿಂದ ವರ್ತಿಸುವ ಮೂಲಕ ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡಿದ.

ಸೆ.12ರಂದು ಅರಮನೆ ಕೋಟೆ ಮಾರಮ್ಮ ದೇವಾಲಯ ಬಳಿಯ ಪಾರ್ಕಿಂಗ್‌ನಲ್ಲಿ ನಡೆದ ಮೊದಲ ಹಂತದ ಸಿಡಿಮದ್ದು ತಾಲೀಮಿನಲ್ಲಿ ಅರ್ಜುನ, ಅಭಿಮನ್ಯು, ಗೋಪಾಲಸ್ವಾಮಿ, ಮಹೇಂದ್ರ, ಗೋಪಿ, ಹೆಣ್ಣಾನೆಗಳಾದ ಚೈತ್ರ, ಕಾವೇರಿ ಆನೆಗಳು ಭಾರಿ ಶಬ್ದಕ್ಕೆ ಬೆಚ್ಚದೆ ಉತ್ತಮ ಪ್ರದರ್ಶನ ನೀಡಿದರೆ ಭೀಮ, ಧನಂಜಯ, ಸುಗ್ರೀವ, ಪಾರ್ಥಸಾರಥಿ, ಶ್ರೀರಾಮ ಆನೆಗಳು ಬೆದಿದ್ದವು. ಆದರೆ ಶುಕ್ರವಾರ ನಡೆದ 2ನೇ ಹಂತದ ತಾಲೀಮಿನಲ್ಲಿ ಭೀಮ, ಶ್ರೀರಾಮ ಮತ್ತು ಸುಗ್ರೀವ ಉತ್ತಮ ಪ್ರದರ್ಶನ ನೀಡಿದವು. ಈ ಮೂಲಕ ಧನಂಜಯ ಮತ್ತು ಪಾರ್ಥಸಾರಥಿ ಹೊರತಾಗಿ ಎಲ್ಲಾ ಆನೆಗಳು ಭಾರಿ ಶಬ್ದಕ್ಕೆ ಹೊಂದಿಕೊಂಡಿರುವುದು ಕಂಡುಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next