Advertisement

ಶುದ್ಧ ಕುಡಿಯುವ ನೀರಿಗಾಗಿ ಕೆಳಪೇಟೆಯ ಜನರ ಪರದಾಟ

09:19 PM Oct 18, 2020 | mahesh |

ಬಸ್ರೂರು: ಬಸ್ರೂರು ಕೆಳ ಪೇಟೆಯಲ್ಲಿರುವ ಸಾರ್ವಜನಿಕ ಬಾವಿಯ ನೀರು ಕಲುಷಿತಗೊಂಡು ಯಾವ ಉಪಯೊಗಕ್ಕೂ ಬಾರದ ಸ್ಥಿತಿಯಲ್ಲಿದೆ.

Advertisement

ಬಾವಿ ಕಳೆದ ಹತ್ತು ವರ್ಷಗಳಿಂದಲೂ ಹೀಗೆಯೇ ಇದೆ. ಬಸ್ರೂರು ಗ್ರಾ.ಪಂ.ನ 10ನೇ ವಾರ್ಡ್‌ನಲ್ಲಿರುವರು ಈ ಬಾವಿಯನ್ನು ಸ್ವತ್ಛಗೊಳಿಸಿ ನಿತ್ಯ ಬಳಕೆಗೆ ಅನುವು ಮಾಡಿ ಕೊಡುವಂತೆ ಅನೇಕ ಬಾರಿ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಪ್ರಸ್ತುತ ಗ್ರಾ.ಪಂ. ಆಡಳಿತ ಇಲ್ಲದಿದ್ದರೂ ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಹೂಳನ್ನು ತೆಗೆದು ಸ್ವಚ್ಛಗೊಳಿಸಿದಲ್ಲಿ ಇಲ್ಲಿನ ಜನರಿಗೆ ಸ್ವತ್ಛ ನೀರು ಲಭ್ಯವಾಗುತ್ತದೆ.

ನೀರಿಗಾಗಿ ದೂರದ ಊರನ್ನು ಆಶ್ರಯಿಸಬೇಕಾಗಿದೆ
ಬಸ್ರೂರು ಕೆಳಪೇಟೆಯಲ್ಲಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದೇನೆ. ನಮಗೆ ಕುಡಿಯಲು ಸ್ವಚ್ಛ ನೀರು ಸಿಗುತ್ತಿಲ್ಲ. ಬಟ್ಟೆ ಒಗೆಯಲೂ ಈ ನೀರು ಪ್ರಯೋಜನಕ್ಕೆ ಬರುತ್ತಿಲ್ಲ. ನೀರಿಗಾಗಿ ದೂರದ ಬಾವಿಯನ್ನು ಆಶ್ರಯಿಸಬೇಕಾಗಿದೆ. – ಕೆಳಪೇಟೆ ಬಾಡಿಗೆ ಮನೆ ನಿವಾಸಿ.

ಮನವಿ ಕೊಟ್ಟಿಲ್ಲ
ಬಸ್ರೂರು ಕೆಳಪೇಟೆಯ ಹತ್ತನೇ ವಾರ್ಡಿನ ಬಾವಿಯ ನೀರನ್ನು ಯಾರೂ ಉಪಯೋಗಿಸುತ್ತಿಲ್ಲ. ಅಲ್ಲಿನ ಎಲ್ಲ ಮನೆಗಳಿಗೆ ನಳ್ಳಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಯಾರಾದ‌ರೂ ಆ ಬಾವಿಯ ನೀರು ಬೇಕು ಎಂದು ಮನವಿ ಕೊಟ್ಟಲ್ಲಿ ಶೀಘ್ರ ಸ್ವತ್ಛಗೊಳಿಸಲಾಗುವುದು. -ನಾಗೇಂದ್ರ ಜೆ., ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ. ಬಸ್ರೂರು

Advertisement

Udayavani is now on Telegram. Click here to join our channel and stay updated with the latest news.

Next