Advertisement

ಖುಷಿಯಿಂದಲೇ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರು

12:03 AM May 30, 2019 | Sriram |

ಮಹಾನಗರ: ಎಲ್ಲ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬುಧವಾರ 2019- 20ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ತೆರೆದುಕೊಂಡಿವೆ. ಬೇಸಗೆ ರಜೆಯ ಮಜಾವನ್ನು ಕಳೆದು ವಿದ್ಯಾರ್ಥಿಗಳೂ ಖುಷಿಯಲ್ಲಿ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಅವರನ್ನು ಬರ ಮಾಡಿಕೊಳ್ಳಲು ನಗರದ ಎಲ್ಲ ಸರಕಾರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲಾಯಿತು.

Advertisement

ಎಪ್ರಿಲ್ ಹತ್ತರಿಂದ ಒಂದೂ ವರೆ ತಿಂಗಳಿಗೂ ಹೆಚ್ಚು ಕಾಲ ರಜಾ ಕಾಲದ ಸಂಭ್ರಮವನ್ನು ಅನುಭವಿಸಿದ್ದ ಮಕ್ಕಳಿಗೆ ಇನ್ನೇನಿದ್ದರೂ ಬ್ಯಾಗ್‌ ಹೆಗಲೇರಿಸಿಕೊಂಡು ಶಾಲೆಗೆ ತೆರಳುವ ಸಮಯ. ಆಟದಲ್ಲಿ ಮೈಮರೆತ ಮಕ್ಕಳಿಗೆ ಪಾಠ ಕಲಿಯುವ ದಿನಗಳು. ರಜಾ ಕಾಲದಲ್ಲಿ ಖುಷಿಯಲ್ಲಿದ್ದ ಮಕ್ಕಳಿಗೆ ರಜೆ ಕಳೆದು ಶಾಲೆಗೆ ಬರುವಾಗ ಬೇಸರವಾಗಬಾರದು ಎಂಬ ಕಾರಣಕ್ಕಾಗಿ ಕೆಲವು ವರ್ಷಗಳಿಂದ ಸರಕಾರವು ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲು ಸೂಚಿಸಿತ್ತು.

ಹೂ ನೀಡಿ ಸ್ವಾಗತ
ಎಲ್ಲ ಶಾಲೆಗಳಲ್ಲಿಯೂ ಮಕ್ಕಳನ್ನು ವಿಶಿಷ್ಟವಾಗಿ ಸ್ವಾಗತಿಸಲಾಯಿತು. ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆ ಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಅತ್ತಾವರ, ಗಾಂಧಿ ನಗರ, ಕೊಂಚಾಡಿ ರಾಮಾಶ್ರಮ ಶಾಲೆಯಲ್ಲಿ ಶಾಲಾ ಗೇಟ್ ಬಳಿ ನಿಂತಿದ್ದ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಯೊಳಗೆ ಬರಮಾಡಿಕೊಂಡರು. ಶಿಕ್ಷಕರ ಪ್ರೀತಿಗೆ ಫಿದಾ ಆದ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸುತ್ತಲೇ ಶಾಲೆಯೊಳಗೆ ಪ್ರವೇಶಿಸಿದರು. ಒಂದೂವರೆ ತಿಂಗಳಿನಿಂದ ದೂರವಾಗಿದ್ದ ಸ್ನೇಹಿತರ ಒಡನಾಟ ಈಗ ಮರು ಬೆಸೆದುಕೊಂಡಿದ್ದರಿಂದ ಫುಲ್ ಖುಷಿಯಾದ ಮಕ್ಕಳು ಪರಸ್ಪರ ರಜೆಯ ದಿನಗಳನ್ನು ಮೆಲುಕು ಹಾಕತೊಡಗಿದರು.

ಬಳಿಕ ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಹೆತ್ತವರು ಮತ್ತು ಮಕ್ಕಳನ್ನೊಳಗೊಂಡ ಸಭೆ ನಡೆಸಿ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಬಳಿಕ ಪಠ್ಯಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿಗಳು, ಹೆತ್ತವರು ಮತ್ತು ಬಂದ ಎಲ್ಲ ಅತಿಥಿಗಳಿಗೆ ಸಿಹಿತಿಂಡಿ ವಿತರಣೆ ನಡೆಯಿತು.

ಗಾಂಧಿನಗರ ಶಾಲೆಯಲ್ಲಿ ಮಾಜಿ ಕಾರ್ಪೊರೇಟರ್‌ ಜಯಂತಿ ಆಚಾರ್‌, ಐಆರ್‌ಟಿ ಸಾಧನಾ, ಎಸ್‌ಡಿಎಂಸಿ ಸದಸ್ಯ ಕನಕಪ್ಪ, ಮುಖ್ಯೋಪಾಧ್ಯಾಯಿನಿ ಯಶೋದಾ ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್‌ ಸುವರ್ಣ, ನಿವೃತ್ತ ಶಿಕ್ಷಕಿ ವೀಣಾ ಬಿ. ಮತ್ತಿತರರು ಉಪಸ್ಥಿತರಿದ್ದರು.

Advertisement

ಅತ್ತಾವರ ಹಿ.ಪ್ರಾ. ಶಾಲೆಯಲ್ಲಿ ಗೌರವ ಸಲಹೆಗಾರ ರತೀಂದ್ರನಾಥ್‌ ಎಚ್., ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ, ನಿವೃತ್ತ ಮುಖ್ಯೋಪಾಧ್ಯಾಯಿನಿ ಹೇಮಾವತಿ ಪಿ.ಎಸ್‌., ಪ್ರಭಾರ ಮುಖ್ಯೋಪಾಧ್ಯಾಯಿನಿ ಜಯಾ ಮತ್ತಿತರರು ಉಪಸ್ಥಿತರಿದ್ದರು.

ಬಿಸಿಯೂಟ ಸವಿದರು
ಬೆಳಗ್ಗೆ ಒಂಬತ್ತು ಗಂಟೆಗೆ ಶಾಲೆಗೆ ಆಗಮಿಸಿದ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಬಳಿಕ ತಮ್ಮ ತಮ್ಮ ತರಗತಿಗೆ ತೆರಳಿ ಹೊಸ ಪಠ್ಯಪುಸ್ತಕಗಳನ್ನು ನೋಡಿದರು. ಬಳಿಕ ಮಧ್ಯಾಹ್ನದ ಬಿಸಿಯೂಟ ಸವಿದರು. ಕೆಲವು ಶಾಲೆಗಳಲ್ಲಿ ಬಿಸಿಯೂಟಕ್ಕೆ ಪಾಯಸದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಟ್ಯಾಂಕರ್‌ ನೀರು ಪೂರೈಕೆ
ಶಾಲಾರಂಭದ ದಿನದಂದೇ ಕೆಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಉಂಟಾಯಿತು.
ವಿಶೇಷವೆಂದರೆ, ಈ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ಮಕ್ಕಳಿಗೆ ಸಂಪೂರ್ಣ ಇಂಗ್ಲಿಷ್‌ನಲ್ಲಿ ಕಲಿಯುವ ಸದವಕಾಶ ಲಭ್ಯವಾಗಲಿದೆ. ಕನ್ನಡ ಭಾಷಾ ಪಠ್ಯ ಹೊರತು ಪಡಿಸಿ ಇಂಗ್ಲಿಷ್‌, ಪರಿಸರ ಅಧ್ಯಯನ ಮತ್ತು ಗಣಿತ ಪಠ್ಯಗಳನ್ನು ಮಕ್ಕಳು ಇಂದಿನಿಂದಲೇ ಇಂಗ್ಲಿಷ್‌ನಲ್ಲಿ ಕಲಿಯಲಿದ್ದಾರೆ. ಆದರೆ, ಕನ್ನಡ ಮಾಧ್ಯಮ ಬೇಕಾದವರಿಗೆ ನಲಿಕಲಿ ಯೋಜನೆಯಡಿಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣವೂ ಇರಲಿದೆ ಎಂದು ಶಾಲೆಗಳ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ಇಂಗ್ಲಿಷ್‌ ಮಾಧ್ಯಮ ಆರಂಭ

ವಿಶೇಷವೆಂದರೆ, ಈ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿ ಮಕ್ಕಳಿಗೆ ಸಂಪೂರ್ಣ ಇಂಗ್ಲಿಷ್‌ನಲ್ಲಿ ಕಲಿಯುವ ಸದವಕಾಶ ಲಭ್ಯವಾಗಲಿದೆ. ಕನ್ನಡ ಭಾಷಾ ಪಠ್ಯ ಹೊರತು ಪಡಿಸಿ ಇಂಗ್ಲಿಷ್‌, ಪರಿಸರ ಅಧ್ಯಯನ ಮತ್ತು ಗಣಿತ ಪಠ್ಯಗಳನ್ನು ಮಕ್ಕಳು ಇಂದಿನಿಂದಲೇ ಇಂಗ್ಲಿಷ್‌ನಲ್ಲಿ ಕಲಿಯಲಿದ್ದಾರೆ. ಆದರೆ, ಕನ್ನಡ ಮಾಧ್ಯಮ ಬೇಕಾದವರಿಗೆ ನಲಿಕಲಿ ಯೋಜನೆಯಡಿಯಲ್ಲಿ ಕನ್ನಡ ಮಾಧ್ಯಮ ಶಿಕ್ಷಣವೂ ಇರಲಿದೆ ಎಂದು ಶಾಲೆಗಳ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.

ಹೂ ನೀಡಿ ಸ್ವಾಗತ
ಬೆಳಗ್ಗೆ ಮಕ್ಕಳಿಗೆ ಹೂ ನೀಡಿ ಅವರನ್ನು ಶಾಲೆಗೆ ಬರ ಮಾಡಿಕೊಳ್ಳಲಾಯಿತು. ಉತ್ಸಾಹದಿಂದಲೇ ಮಕ್ಕಳು ಶಾಲೆಗೆ ಆಗಮಿಸಿದ್ದಾರೆ. ಮಕ್ಕಳು ಮತ್ತು ಹೆತ್ತವರಿಗೆ ಇಡೀ ವರ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು.
– ಯಶೋದಾ ಬಿ.,

ಮುಖ್ಯೋಪಾಧ್ಯಾಯಿನಿ ಗಾಂಧಿನಗರ ಸ.ಹಿ.ಪ್ರಾ. ಶಾಲೆ
ಈ ಶೈಕ್ಷಣಿಕ ವರ್ಷದಿಂದ ಆಯ್ದ ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುವ ಅವಕಾಶವಿದೆ. ಅದರಂತೆ ಅತ್ತಾವರ ಸರಕಾರಿ ಶಾಲೆಯಲ್ಲಿ ಶಾಲಾರಂಭದ ದಿನವಾದ ಬುಧವಾರದಂದೇ ಆಂಗ್ಲ ಭಾಷಾ ಶಿಕ್ಷಕಿ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಬೋಧಿಸಿದರು. ಮಕ್ಕಳೂ ಖುಷಿಯಿಂದಲೇ ಭಾಷಾ ಕಲಿಕೆಯಲ್ಲಿ ತೊಡಗಿದ್ದರು.

ಗಾಂಧಿನಗರ ಶಾಲೆಯಲ್ಲಿ ಮಾಜಿ ಕಾರ್ಪೊರೇಟರ್‌ ಜಯಂತಿ ಆಚಾರ್‌, ಐಆರ್‌ಟಿ ಸಾಧನಾ, ಎಸ್‌ಡಿಎಂಸಿ ಸದಸ್ಯ ಕನಕಪ್ಪ, ಮುಖ್ಯೋಪಾಧ್ಯಾಯಿನಿ ಯಶೋದಾ ಬಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್‌ ಸುವರ್ಣ, ನಿವೃತ್ತ ಶಿಕ್ಷಕಿ ವೀಣಾ ಬಿ. ಉಪಸ್ಥಿತರಿದ್ದರು.

ಅತ್ತಾವರ ಹಿ.ಪ್ರಾ. ಶಾಲೆಯಲ್ಲಿ ಗೌರವ ಸಲಹೆಗಾರ ರತೀಂದ್ರನಾಥ್‌ ಎಚ್., ಎಸ್‌ಡಿಎಂಸಿ ಅಧ್ಯಕ್ಷೆ ಕವಿತಾ, ಹೇಮಾವತಿ ಪಿ.ಎಸ್‌., ಪ್ರಭಾರ ಮುಖ್ಯೋ ಪಾಧ್ಯಾಯಿನಿ ಜಯಾ ಉಪಸ್ಥಿತರಿದ್ದರು.

ಬಿಸಿಯೂಟ ಸವಿದರು
ಬೆಳಗ್ಗೆ ಒಂಬತ್ತು ಗಂಟೆಗೆ ಶಾಲೆಗೆ ಆಗಮಿಸಿದ ಮಕ್ಕಳು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿದರು. ಬಳಿಕ ತಮ್ಮ ತಮ್ಮ ತರಗತಿಗೆ ತೆರಳಿ ಹೊಸ ಪಠ್ಯಪುಸ್ತಕಗಳನ್ನು ನೋಡಿದರು. ಬಳಿಕ ಮಧ್ಯಾಹ್ನದ ಬಿಸಿಯೂಟ ಸವಿದರು. ಕೆಲವು ಶಾಲೆಗಳಲ್ಲಿ ಬಿಸಿಯೂಟಕ್ಕೆ ಪಾಯಸದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಟ್ಯಾಂಕರ್‌ ನೀರು ಪೂರೈಕೆ
ಶಾಲಾರಂಭದ ದಿನದಂದೇ ಕೆಲವು ಶಾಲೆಗಳಲ್ಲಿ ನೀರಿನ ಸಮಸ್ಯೆ ಉಂಟಾಯಿತು. ಆದರೆ ತತ್‌ಕ್ಷಣ ಮನಪಾ ಸಂಬಂಧಪಟ್ಟವರಿಗೆ ತಿಳಿಸಿದ್ದರಿಂದ ಟ್ಯಾಂಕರ್‌ ಮೂಲಕ ನೀರು ತಂದು ತೊಂದರೆಯಾಗದಂತೆ ನೋಡಿಕೊಳ್ಳಲಾಯಿತು.

ಖಾಸಗಿ ಶಾಲೆ ತಡವಾಗಿ ಆರಂಭ
ನಗರದ ಕೆಲವು ಖಾಸಗಿ ಶಾಲೆಗಳಲ್ಲಿ ಬುಧವಾರವೇ ಶಾಲಾರಂಭವಾದರೆ, ಬಹುತೇಕ ಶಾಲೆಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ತಡವಾಗಿ ಶಾಲಾರಂಭ ವಾಗಲಿದೆ. ಕೆಲವೆಡೆ ಜೂ. 7, ಜೂ. 10ರಂದು ಶಾಲೆಗಳು ಆರಂಭವಾಗಲಿವೆ ಎಂಬುದಾಗಿ ಖಾಸಗಿ ಶಾಲಾ ಶಿಕ್ಷಕರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next