Advertisement

ಸಂಪಾಜೆ-ಊರುಬೈಲು ಸೇತುವೆ ಸಂಪೂರ್ಣ ಹಾನಿ

01:38 AM Aug 11, 2019 | Team Udayavani |

ಸುಳ್ಯ : ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಪಯಸ್ವಿನಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದರಿಂದ ಸಂಪಾಜೆ – ಊರುಬೈಲು ಮೂಲಕ ಮಾರ್ಪಡ್ಕ ಸಂಪರ್ಕಿಸುವ ಸೇತುವೆ ಸಂಪೂರ್ಣ ಹಾನಿಯಾಗಿದ್ದು, ವಾಹನ ಸಂಪರ್ಕ ಕಡಿತಗೊಂಡಿದೆ.

Advertisement

ಕಳೆದ ವರ್ಷ ಇದೇ ಅವಧಿಯಲ್ಲಿ ಜೋಡುಪಾಲ ಮತ್ತು ಮೊಣ್ಣಂಗೇರಿ ಪ್ರದೇಶದಲ್ಲಿ ಸಂಭವಿಸಿದ ಜಲಪ್ರಳಯದಿಂದ ಬೃಹದಾಕಾರದ ಮರಗಳು ಬಂದು ಸೇತುವೆಗೆ ಅಡ್ಡಲಾಗಿ ನಿಂತು, ಸೇತುವೆ ಒಂದು ಭಾಗ ನೀರುಪಾಲಾಗಿತ್ತು. ಬಳಿಕ ಕೊಡಗು ಜಿಲ್ಲಾಡಳಿತ ಮತ್ತು ಊರವರು ಸೇರಿ ಸೇತುವೆ ದುರಸ್ತಿ ಮಾಡಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

ಆದರೆ ಮಡಿಕೇರಿ ಭಾಗದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಯಸ್ವಿನಿ ನದಿಗೆ ಅಡ್ಡಲಾಗಿರುವ ಸಂಪಾಜೆ – ಊರುಬೈಲು Ó ‌ಂಪರ್ಕ ಸೇತುವೆ ಸಂಪೂರ್ಣ ಹಾನಿಯಾಗಿ, ವಾಹನ ಸಂಪರ್ಕ ಕಡಿತಗೊಂಡಿದೆ. ಸೇತುವೆಯ ಹಲವು ಭಾಗಗಳು ಕೊಚ್ಚಿಹೋಗಿವೆ. ಇದರಿಂದ 200 ಕುಟುಂಬಗಳು ಬಾಲೆಂಬಿ ಮೂಲಕ ಸುತ್ತುಬಳಸಿ ಸಂಪರ್ಕಿಸುವ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next