Advertisement

ನಿವೃತ್ತಿ ದಿನ ಚಾಲಕನಿಗೆ ತಾವೆ ವಾಹನ ಚಲಾಯಿಸಿ ಮನೆಗೆ ಬಿಟ್ಟು ಬಂದ ಆರ್ ಟಿ ಓ

08:21 PM Jul 01, 2022 | Vishnudas Patil |

ಶಿವಮೊಗ್ಗ: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿಗೌಡರು ನಿವೃತ್ತರಾಗಿದ್ದು, ಅವರನ್ನು ಸಾರಿಗೆ ಅಧಿಕಾರಿ ದೀಪಕ್ ಎಲ್. ಅವರು ಮನೆಗೆ ತಮ್ಮ ವಾಹನದಲ್ಲಿಯೇ ತಾವೇ ಚಾಲನೆ ಮಾಡಿಕೊಂಡು ಹೋಗಿಬಿಟ್ಟು ಬಂದ ಹೃದಯಸ್ಪರ್ಶಿ ಘಟನೆ ನಡೆದಿದೆ.

Advertisement

ಸಾರಿಗೆ ಕಚೇರಿಯಲ್ಲಿ ಸ್ವಾಮಿಗೌಡರು ಹಲವು ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ನಿನ್ನೆ ಅವರು ನಿವೃತ್ತರಾಗಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ, ಆರೋಗ್ಯವಾಗಿರಲಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾರೈಸಿದರು.

ನಂತರ ಸ್ವಾಮಿ ಗೌಡ ಅವರನ್ನು ಆರ್ ಟಿ ಓ ದೀಪಕ್ ಅವರೇ ವಾಹನ ಚಾಲನೆ ಮಾಡಿಕೊಂಡು ಹೋಗಿ ಮನೆಗೆ ಬಿಟ್ಟು ಬಂದಿದ್ದಾರೆ. ಈ ಸಂದರ್ಭದಲ್ಲಿ ಮೋಟಾರು ವಾಹನ ನಿರೀಕ್ಷಕ ಮಲ್ಲೇಶಪ್ಪ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next