Advertisement

ಫ‌ಲಿತಾಂಶ ಆತ್ಮವಿಶ್ವಾಸ ಹೆಚ್ಚಿಸಿದೆ: ಸ್ವಾತಿ

03:39 AM Apr 16, 2019 | Team Udayavani |

ಉಡುಪಿ: ಎಂಜಿಎಂ ವಿದ್ಯಾರ್ಥಿನಿ ಸ್ವಾತಿ 592 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

Advertisement

ಅಂಬಾಗಿಲು ಮಹಾಲಕ್ಷ್ಮೀ ನಗರದ ಉದಯಶಂಕರ ನಾಯಕ್‌ ಹಾಗೂ ಗಿರಿಜಾ ನಾಯಕ್‌ ದಂಪತಿಯ ದ್ವಿತೀಯ ಪುತ್ರಿ ಸ್ವಾತಿ. ಗಣಿತ ಮತ್ತು ರಾಸಾಯನಶಾಸ್ತ್ರದಲ್ಲಿ ತಲಾ 100, ಭೌತಶಾಸ್ತ್ರ ಮತ್ತು ಕಂಪ್ಯೂಟರ್‌ ಸೈನ್ಸ್‌ ನಲ್ಲಿ ತಲಾ 99 ಅಂಕ, ಹಿಂದಿಯಲ್ಲಿ 98, ಇಂಗ್ಲಿಷ್‌ನಲ್ಲಿ 96, ಗಳಿಸಿದ್ದಾರೆ.

ತಂದೆ ಬೆಂಗಳೂರು ಗಾಂಧಿ ನಗರ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಮ್ಯಾನೇಜರ್‌ ಆಗಿದ್ದು, ತಾಯಿ ಕುಂಜಿಬೆಟ್ಟು ಯುಪಿಎಂಸಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಕ್ಲರ್ಕ್‌ ಕೆಲಸ ಮಾಡುತ್ತಿದ್ದಾರೆ.

ಎಂಜಿನಿಯರಿಂಗ್‌ ಕನಸು
ಪಿಯುಸಿ ಫ‌ಲಿತಾಂಶ ಬೇಗನೆ ಪ್ರಕಟಗೊಂಡಿರುವುದರಿಂದ ಸಿಇಟಿ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಹೆಚ್ಚಾಗಿದೆ. ಪೂರ್ವ ತಯಾರಿಗೂ ಅನುಕೂಲ ವಾಗಿದೆ. ಸಿಇಟಿ ಪರೀಕ್ಷೆ ಬರೆದು ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ಕಲಿತು ಮುಂದೆ ಸಾಫ್ಟ್ವೇರ್‌ ಎಂಜಿನಿಯರ್‌ ಆಗಬೇಕೆಂಬುದು ನನ್ನ ಕನಸು ಎಂದರು.

ಮಗಳ ಸಾಧನೆ ಖುಷಿ
ತಂದಿದೆ ಮಗಳ ಸಾಧನೆ ಅತ್ಯಂತ ಖುಷಿ ತಂದಿದೆ. ಇಂತಹ ಮಗಳನ್ನು ಪಡೆದ ನಾವು ನಿಜವಾಗಿಯೂ ಪುಣ್ಯವಂತರು. ನಾವು ಯಾರು ಕೂಡ ಓದುವಂತೆ ಅವಳ ಮೇಲೆ ಒತ್ತಡ ಹೇರಿಲ್ಲ. ಅವಳ ಇಷ್ಟದಂತೆ ಓದಿ, ಸ್ವ ಪ್ರಯತ್ನದಿಂದಲೇ ಈ ಸಾಧನೆ ಮಾಡಿದ್ದಾಳೆ.
-ಗಿರಿಜಾ ನಾಯಕ್‌, ತಾಯಿ

Advertisement
Advertisement

Udayavani is now on Telegram. Click here to join our channel and stay updated with the latest news.

Next