Advertisement
ವಾರ್ಷಿಕ ಸಾಲ ಯೋಜನೆಯಲ್ಲಿ 5242 ಕೋಟಿ ರೂ. ಆದ್ಯತಾ ವಲಯ ಕ್ಷೇತ್ರಕ್ಕೆ ಮತ್ತು 1159 ಕೋಟಿ ರೂ. ಆದ್ಯತಾ ವಲಯ ರಹಿತ ಕ್ಷೇತ್ರಕ್ಕೆ ಕಾಯ್ದಿರಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಬ್ಯಾಂಕ್ ಅಧಿಕಾರಿಗಳು ಗ್ರಾಹಕ ಸ್ನೇಹಿ, ರೈತ ಸ್ನೇಹಿ ಹಾಗೂ ಜನಸ್ನೇಹಿಯಾಗಿ ಸೇವೆ ಸಲ್ಲಿಸಲು ಕಂಕಣಬದ್ಧರಾಗಬೇಕು.
Related Articles
Advertisement
ಕೃಷಿಯೇತರ ಚಟುವಟಿಕೆಗಳಿಗಾಗಿ 1077 ಕೋಟಿ ರೂ. ಹಾಗೂ ಇತರೆ ಆದ್ಯತೇತರ ವ್ಯಾಪಾರ ಮತ್ತು ಸೇವಾ ಕ್ಷೇತ್ರಕ್ಕೆ 605 ಕೋಟಿ ರೂ. ಹಣ ಕಾಯ್ದಿರಿಸಲಾಗಿದೆ. ಆದ್ಯತಾ ವಲಯಕ್ಕಾಗಿ ಕಾಯ್ದಿರಿಸಿದ ಹಣದ ಪೈಕಿ 2793 ಕೋಟಿ ರೂ. ವಾಣಿಜ್ಯ ಬ್ಯಾಂಕ್ಗಳಿಗೆ, ಗ್ರಾಮೀಣ ಬ್ಯಾಂಕ್ಗಳಿಗೆ 1743 ಕೋಟಿ ರೂ., ಸಹಕಾರ ಬ್ಯಾಂಕ್ಗಳಿಗೆ 645 ಕೋಟಿ ರೂ. ಮತ್ತು ಇತರ ಬ್ಯಾಂಕ್ಗಳಿಗೆ 61 ಕೋಟಿ ರೂ. ಗುರಿ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ರಿಜರ್ವ್ ಬ್ಯಾಂಕ್ ಸಹಾಯಕ ಜನರಲ್ ಮ್ಯಾನೇಜರ್ ಗೋಪಾಲ ತೇರದಾಳ ಮತ್ತು ನಬಾರ್ಡ್ ಸಂಸ್ಥೆ ಡಿಡಿಎಂ ರಮೇಶ ಭಟ್, ಎಸ್ಬಿಐ ರೀಜನಲ್ ಮ್ಯಾನೇಜರ್ ಶಂಕರ ಪ್ರಸಾದ ಪಿ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲೀಡ್ ಬ್ಯಾಂಕ್ ಅಧಿಕಾರಿ ಪದ್ಮಾಜಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.